Saturday, 10th May 2025

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನ

ಮಂಡ್ಯ/ಮೈಸೂರು: ಹಿರಿಯ ರಾಜಕಾರಣಿ, ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ(80)  ಶುಕ್ರವಾರ ನಿಧನರಾದರು. ಲಿವರ್ ಕ್ಯಾನ್ಸರ್​ಗೆ ತುತ್ತಾಗಿದ್ದ ಕೆ.ಆರ್.ಪೇಟೆ ಕೃಷ್ಣ ಅವರಿಗೆ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೈಸೂರಿನ ಕುವೆಂಪು ನಗರದ ನಿವಾಸಕ್ಕೆ ಕರೆ ತರಲಾಗಿತ್ತು. ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕೆ.ಆರ್‌.ಪೇಟೆ ತಾಲೂಕಿನ ಕೊತ್ತಮಾರನಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕೆ.ಆರ್‌.ಪೇಟೆ ಕ್ಷೇತ್ರದಿಂದ ಮೂರು ಶಾಸಕರಾಗಿ ಆಯ್ಕೆಯಾಗಿದ್ದ ಕೃಷ್ಣ, ಸಚಿವರಾಗಿ, ಸ್ಪೀಕರ್ ಆಗಿ ಕೆಲಸ ನಿರ್ವಹಿಸಿದ್ದರು. […]

ಮುಂದೆ ಓದಿ

ಮೂಲ ಸೌಲಭ್ಯ ವಂಚಿತ ಹಂದಿ ಜೋಗಿ ಕುಟುಂಬ

ಸ್ವಂತ ಸೂರಿಲ್ಲದೆ ಹೀನಾಯ ಬದುಕು ವಿದ್ಯಾಭ್ಯಾಸ ಮೊಟಕು ಜಿಲ್ಲಾಡಳಿತದ ಆಸರೆಗಾಗಿ ಕಾದು ಸುಸ್ತು ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದ ಹಂದಿಜೋಗಿ ಕುಟುಂಬಗಳು...

ಮುಂದೆ ಓದಿ

ನ್ಯಾಯದಾನ ಸೇವೆಗೆ ಮುನ್ನಡೆಯಿಟ್ಟ ತೃತೀಯ ಲಿಂಗಿ

ಮೂದಲಿಸುವವರ ನಡುವೆ ಮೈದಳೆದ ಮೈಸೂರಿನ ಶಶಿ ಅಲಿಯಾಸ್ ಶಶಿಕುಮಾರ್ ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು ಮೈಸೂರು: ಅವರು ಸಮಾಜದ ಮೂದಲಿಕೆಗೆ ಒಳಗಾದರೂ ಆಂತರ‌್ಯದಲ್ಲಿದ್ದ ಛಲ ಅವರ ಬದುಕಿನ ದಿಕ್ಕನ್ನೇ...

ಮುಂದೆ ಓದಿ

ಎರಡನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆ: ಮತದಾನಕ್ಕೆ ಕ್ಷಣಗಣನೆ

ಕೆಲವು ಗ್ರಾಪಂಗಳಲ್ಲಿ ಮತ ಹಾಕದಂತೆ ತಡೆಯುವ ಪ್ರಯತ್ನ ಮಹಿಳೆಯರಿಗೆ ಮೂಗುಬೊಟ್ಟು, ಸೀರೆ ಮತ್ತಿತರ ಆಮಿಷ ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗ್ರಾಪಂಗಳಲ್ಲಿ ಚುನಾವಣೆ ಕಾವು ಬೆಂಗಳೂರು: ಎರಡನೆ ಹಂತದ...

ಮುಂದೆ ಓದಿ