Saturday, 10th May 2025

Kalaburagi News: ವಕೀಲನ ಮೇಲೆ ಬರ್ಬರ ಹಲ್ಲೆ; ಚಿಂಚೋಳಿ ವಕೀಲರ ಸಂಘದಿಂದ ಪ್ರತಿಭಟನೆ

kalaburagi News

ಚಿಂಚೋಳಿ: ತಮಿಳುನಾಡು ರಾಜ್ಯದ ಹೊಸೂರು ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ವಕೀಲನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿರುವ ಘಟನೆ ಖಂಡಿಸಿ, ಚಿಂಚೋಳಿ ವಕೀಲರ ಸಂಘವು ಒಂದು ದಿನದ ನ್ಯಾಯಾಲಯ ಕಲಾಪಗಳಲ್ಲಿ ಭಾಗಿಯಾಗದೆ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ (Kalaburagi News) ನಡೆಸಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ನಡೆದ ತಮಿಳುನಾಡು ರಾಜ್ಯದ ಹೊಸೂರು ನ್ಯಾಯಾಲಯದಲ್ಲಿ ವೃತ್ತಿಯ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿ ತೊಡಗಿಕೊಂಡಿದ್ದ ವಕೀಲನ ಮೇಲೆ ವ್ಯಕ್ತಿಯೊಬ್ಬ ಬರ್ಬರವಾಗಿ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದ ವಕೀಲರ ವೃತ್ತಿಗೆ ಧಕ್ಕೆ ಬರುವುದಲ್ಲದೆ, ವೃತ್ತಿ ಮಾಡುವುದಕ್ಕೂ ಕಲಿಯುವುದಕ್ಕೂ ಹೆದರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕೀಲರ ಮೇಲಿನ ಹಲ್ಲೆಗಳು ತಡೆಯಲಾಗುತ್ತಿಲ್ಲ. ಹೀಗಾಗಿ ಸರ್ಕಾರ ವಕೀಲರ ಮೇಲಿನ ಹಲ್ಲೆಗಳ ವಿರುದ್ಧ ಗಂಭೀರ ಕ್ರಮ ಕೈಗೊಂಡು ವಕೀಲರಿಗೆ ರಕ್ಷಣೆ ಮಾಡುವ ಕ್ರಮಕೈಗೊಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗೃಹ ಇಲಾಖೆಗೆ ಸೂಚನೆ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ | Bypoll Result 2024: ನಾಳೆ ಉಪ ಚುನಾವಣೆ ಮತ ಎಣಿಕೆ: ಮದ್ಯ ಮಾರಾಟ ನಿಷೇಧ

ಪ್ರತಿಭಟನೆಯಲ್ಲಿ ಹಿರಿಯ ವಕೀಲ ವಿಶ್ವನಾಥ ಬೆನಕಿನ್, ಚಂದ್ರಶೆಟ್ಟಿ ಜಾಧವ್, ನಾಗಭೂಷಣ ಎಚ್, ಶ್ರೀನಿವಾಸ ಭಂಡಿ, ವಸಂತ ರಾಠೋಡ, ವಿಜಯಕುಮಾರ ರಾಠೋಡ, ದೀಲೀಪ ಚವ್ಹಾಣ, ಭೀಮಾಶಂಕರ ಕಳಸ್ಕರ್, ರಾಜಶೇಖರ ಉಡಗಿ, ಚಂದು ಮಲಸಾ, ಜಗನ್ನಾಥ ಗಂಜಗಿರಿ, ಶೇಕ್ ಭಕ್ತಿಯಾರ, ಮಾಣಿಕಾರವ ಅಣವಾರ, ಇರ್ಫಾನ ಮಾಲಿಪಾಟೀಲ, ದೇವೀಂದ್ರ ಜಾಬೀನ್, ರಾಜೇಂದ್ರ ವರಮಾ ಅವರು ಸೇರಿದಂತೆ ಹಲವು ವಕೀಲರು ಉಪಸ್ಥಿತರಿದರು.