Sunday, 11th May 2025

ಬೀದಿ ದೀಪಗಳು ಅನಗತ್ಯ ಉರಿಯೋದನ್ನು ತಡೆಯಲು ಸರ್ಕಾರದ ಮಹತ್ವದ ಹೆಜ್ಜೆ?

ಬೆಂಗಳೂರು: ಇಡೀ ರಾಜ್ಯದ ನಗರಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯ, ತಾಂತ್ರಿಕ ದೋಷ ಹೀಗೆ ಸಾಕಷ್ಟು ಕಾರಣಗಳಿಂದ ಹಗಲಿನಲ್ಲಿಯೂ ಬೀದಿ ದೀಪಗಳು ಉರಿಯೋದನ್ನು ತಡೆಯಲು ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಡುತ್ತಿದೆ.

ಸಾಫ್ಟ್‌ವೇರ್ ಆಧಾರಿತ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಪ್ರಕಾರ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದೇ ಕಡೆ ಕುಳಿತು ಇಡೀ ನಗರದ ಬೀದಿ ದೀಪ ಗಳನ್ನು ಆಪರೇಟ್ ಮಾಡಬಹುದು. ಸಂಜೆ ಹೊತ್ತಿಗೆ ಬೀದಿ ದೀಪ ಆನ್ ಮಾಡಿದರೆ ಇಡೀ ನಗರದಲ್ಲಿನ ಬೀದಿ ದೀಪಗಳು ಉರಿಯು ತ್ತವೆ. ನಂತರ ಬೆಳಗ್ಗೆ ಆಫ್ ಮಾಡಿದರೆ ನಗರದ ಎಲ್ಲಾ ಬೀದಿ ದೀಪಗಳು ನಂದಿ ಹೋಗಲಿದೆ.

ಸದ್ಯ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಹತ್ತು ಜಿಲ್ಲೆಗಳಲ್ಲಿ ಜಾರಿಗೆ ತರಲು ಚಿಂತನೆ ನಡೆದಿದೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು, ಮೈಸೂರು, ಕಲಬುರ್ಗಿ, ಬಳ್ಳಾರಿ ವಿಜಯಪುರ, ಮಂಗಳೂರು ನಗರಗಳನ್ನು ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *