Tuesday, 13th May 2025

ಸಿಂಧನೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

ಸಿಂಧನೂರು : ಸರ್ಕಾರ ಕೂಡಲೇ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಈ ವೇಳೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ರೈತರು ಬೆಳೆದ ಭತ್ತದ ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್ 500. ರೂ  ಪ್ರೋತ್ಸಾಹ ಧನ ಕೊಡಬೇಕು ಹಾಗೂ ಬೇಸಿಗೆ ಬೆಳೆಗೆ ನೀರು ಹರಿಸಲು ಕೂಡಲೇ ಸರಕಾರ ಐಸಿಸಿ ಸಭೆ ಕರೆದು ಸೂಕ್ತ ನಿರ್ಣಯ ಮಾಡಬೇಕು ಎಂದರು.

ಕ್ಷೇತ್ರದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಅವರು ರೈತರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಅಭಿವೃದ್ಧಿಪರ ಕೆಲಸ ಮಾಡು ತ್ತಿಲ್ಲ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಪಂಪನಗೌಡ ಬಾದರ್ಲಿ ಬಸವರಾಜ ಹಿರೇಗೌಡ, ಭೀಮನಗೌಡ ಗೊರೆಬಾಳ, ಎಂ ದೊಡ್ಡ ಬಸವರಾಜ, ಮಲ್ಲಿಕಾರ್ಜುನ್ ಪಾಟೀಲ್, ಮುರ್ತುಜಾ ಹುಸೇನ್, ಜಾಫರ್ ಸಾಬ್ ಜಾಗಿರ್ದಾರ್,ಎಚ್  ಎನ್ ಬಡಿಗೇರ್, ರಾಜುಗೌಡ ಬಾದರ್ಲಿ, ದೊಡ್ಡ ಬಸವರಾಜ ಬಾದರ್ಲಿ ,ಖಾಜಿ ಮಲಿಕ್ ವಕೀಲ್ ,ಅನಿಲ್, ಆರ್ ಸಿ ಪಾಟೀಲ್ ,ಎಚ್ ನಾಗೇಶ್ ,ಆಲಂ ಬಾಷಾ, ನಾಗರಾಜ್  ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *