ಒಂದೊಳ್ಳೆ ಮಾತು
ರೂಪಾ ಗುರುರಾಜ್
ನಳ ಮಹಾರಾಜನ ಹೆಸರನ್ನು ಸಾಮಾನ್ಯವಾಗಿ ನೀವೆಲ್ಲರೂ ಕೇಳಿರುತ್ತೀರಿ. ಈತನು ದ್ವಾಪರ ಯುಗದಲ್ಲಿ ನಿಷಾದ
ಸಾಮ್ರಾಜ್ಯದ ರಾಜನಾಗಿದ್ದವನು. ಸನಾತನ ಗ್ರಂಥಗಳಲ್ಲಿ ಅಕ್ಷಹೃದಯ ಮಂತ್ರದ ಮೂಲಕ ರಾಜ ನಳ ತನ್ನ ಕಳೆದು ಕೊಂಡ ರಾಜ್ಯವನ್ನು ಮರಳಿ ಪಡೆದನೆಂದು ಉಖಿಸಲಾಗಿದೆ. ಈ ಅಕ್ಷ ಹೃದಯ ವಿದ್ಯೆಯನ್ನು ಪಡೆಯುವ
ಮೂಲಕ ರಾಜ ನಳನು ಮರಳಿ ತನ್ನ ಶಕ್ತಿಯನ್ನು ಪಡೆದುಕೊಂಡಿದ್ದನು.
ರಾಜ ನಳನು ಬಹಳ ಕರುಣಾಮಯಿಯಾಗಿದ್ದನು. ರಾಜ ನಳ ಅಕ್ಷ ಹೃದಯ ವಿದ್ಯೆಯನ್ನು ಕಲಿಯಲು ಕಾರಣ ವೇನು? ಈ ಕುರಿತು ಮಾಹಿತಿಯಿದು. ರಾಜ ನಳ ಬಾಲ್ಯದಿಂದಲೂ ಸದ್ಗುಣಶೀಲ, ಧಾರ್ಮಿಕ, ಕಠಿಣ ಪರಿಶ್ರಮ ಮತ್ತು ಶಸಾಸಗಳನ್ನು ಬಳಸುವಲ್ಲಿ ಬಹಳ ಪ್ರವೀಣನಾಗಿದ್ದನು. ರಾಜಕುಮಾರನು ಬೆಳೆದನು. ಈ ಸಮಯದಲ್ಲಿ ನಳನು ದಮಯಂತಿಯನ್ನು ಭೇಟಿಯಾದನು.
ರಾಜಕುಮಾರ ನಳ ಮತ್ತು ದಮಯಂತಿ ಪರಸ್ಪರ ಪ್ರೀತಿಸಲಾರಂಭಿಸಿದರು. ಇತ್ತ ದಮಯಂತಿಯ ತಂದೆ ರಾಜ ಭೀಮನು ತನ್ನ ಮಗಳ ವಿವಾಹಕ್ಕಾಗಿ ಸ್ವಯಂವರವನ್ನು ಏರ್ಪಡಿಸಿದನು. ಈ ಸ್ವಯಂವರದಲ್ಲಿ ರಾಜರು ಸೇರಿದಂತೆ ಅನೇಕ ದೇವರುಗಳು ಭಾಗವಹಿಸಿದ್ದರು. ಆದರೆ, ಎಲ್ಲ ರಾಜಕುಮಾರರು ನಳನ ರೂಪದಲ್ಲಿದ್ದರು. ಆದರೂ ದಮ ಯಂತಿ ತಾನು ಪ್ರೀತಿಸುತ್ತಿದ್ದ ನಳನನ್ನೇ ಪತಿಯಾಗಿ ಆಯ್ದುಕೊಂಡಳು. ರಾಜಕುಮಾರ ನಳನಿಗೂ ರಾಜಕುಮಾರಿ ದಮಯಂತಿಗೂ ವಿವಾಹ ನಡೆಯಿತು. ವಿವಾಹದ ನಂತರ ರಾಜ ನಳ ಮತ್ತು ದಮಯಂತಿಯ ವೈವಾಹಿಕ ಜೀವನ ಬಹಳ ಸಂತೋಷದಿಂದ ಕೂಡಿತ್ತು. ಇಂತಹ ಸಮಯದಲ್ಲಿ ನಳ ಮತ್ತು ದಮಯಂತಿಯನ್ನು ಪರೀಕ್ಷಿಸಲು ಕಾಳಿ ಒಂದು ಕಠಿಣ ಪರೀಕ್ಷೆಯನ್ನು ತಂದೊಡ್ಡಿದಳು. ರಾಜ ನಳನು ಜೂಜಾಟವನ್ನು ಇಷ್ಟ ಪಡುತ್ತಿದ್ದನು.
ಒಂದು ದಿನ ರಾಜ ನಳನು ತನ್ನ ಸಹೋದರ ಪುಷ್ಕರನನ್ನು ಜೂಜಾಡಲು ಆಹ್ವಾನಿಸಿದನು. ಪುಷ್ಕರನು ತನ್ನ ಸಹೋದರನ ಆಹ್ವಾನವನ್ನು ಸ್ವೀಕರಿಸಿದನು. ಆ ಸಮಯದಲ್ಲಿ, ಕಾಳಿಯ ಚಮತ್ಕಾರದಿಂದ, ರಾಜ ನಳ ತನ್ನ ರಾಜ್ಯವನ್ನು ಕಳೆದುಕೊಂಡನು. ಇದಾದ ಬಳಿಕ ರಾಜ ನಳನನ್ನು ಗಡಿಪಾರು ಮಾಡಲಾಯಿತು. ಇದರಿಂದಾಗಿ ರಾಜ ನಳ ಮತ್ತು ಆತನ ಪತ್ನಿ ದಮಯಂತಿ ಕಾಡು ಪಾಲಾದರು.
ಕಾಡಿನಲ್ಲಿ ವಾಸಿಸುವ ಸಮಯದಲ್ಲಿ ರಾಜ ನಳನು ಅನೇಕ ರೀತಿಯಾದ ಸಮಸ್ಯೆಗಳನ್ನು ಎದುರಿಸಿದನು. ತನ್ನ
ಅದೃಷ್ಟವನ್ನು ಮರಳಿ ಪಡೆಯುವುದಕ್ಕಾಗಿ ರಾಜ ನಳನು ಒಂದು ದಿನ ರಾತ್ರಿ ತನ್ನ ಪತ್ನಿ ದಮಯಂತಿಯನ್ನು ಕಾಡಿನ ಬಿಟ್ಟು ಬೇರೆ ದಿಕ್ಕಿನತ್ತ ನಡೆದುಕೊಂಡು ಹೊರಟೆ ಹೋದನು. ದಮಯಂತಿ ಒಬ್ಬಳೇ ಕಾಡಿನಲ್ಲಿ ಬಹಳ ಕಷ್ಟಪಟ್ಟಳು. ಬಳಿಕ ದಮಯಂತಿ ಕಾಡಿಗೆ ಹತ್ತಿರದಲ್ಲಿರುವ ಒಂದು ರಾಜಮನೆತನದಲ್ಲಿ ಆಶ್ರಯವನ್ನು ಪಡೆದು ಕೊಂಡಳು. ಅಷ್ಟರಲ್ಲಿ ನಳ ರಾಜನಿಗೆ ಕಾರ್ಕೋಟಕ ಸರ್ಪ ಕಚ್ಚುತ್ತದೆ.
ಇದರಿಂದ ರಾಜ ನಳ ಕುರೂಪಿಯಾಗುತ್ತಾನೆ. ಇದರ ನಂತರ ರಾಜ ನಳ ಹತ್ತಿರದ ರಾಜನಲ್ಲಿ ಬಾಹುಕನ ಕೆಲಸವನ್ನು ಪಡೆಯುತ್ತಾನೆ. ಈ ಸಮಯದಲ್ಲಿ, ದಮಯಂತಿಯ ಸ್ವಯಂವರವನ್ನು ಅವಳ ಹೆತ್ತವರು ಮತ್ತೆ ಆಯೋಜಿಸುತ್ತಾರೆ. ರಾಜ ಋತುಪರ್ಣನಿಗೂ ಈ ಮಾಹಿತಿ ಸಿಗುತ್ತದೆ. ಆ ಸಮಯದಲ್ಲಿ ಋತುಪರ್ಣ ನಳನೊಂದಿಗೆ ಸ್ವಯಂವರಕ್ಕೆ ಹೋಗುತ್ತಾನೆ. ದಾರಿಯಲ್ಲಿ ಋತುಪರ್ಣನು ರಾಜ ನಳನಿಗೆ ಅಕ್ಷ ಹೃದಯ ಮಂತ್ರವನ್ನು ಕಲಿಸಿದನು. ರಾಜ ನಳ ಈ ಮಂತ್ರದ ಮೂಲಕ ಪುಷ್ಕರನನ್ನು ಸೋಲಿಸಿದನು.
ಇದರೊಂದಿಗೆ ರಾಜ ನಳ ತನ್ನ ಕಳೆದುಹೋದ ರಾಜ್ಯವನ್ನು ಮರಳಿ ಪಡೆದುಕೊಂಡನು. ಅಕ್ಷ ಹೃದಯ ವಿದ್ಯೆ ಅಥವಾ ಮಂತ್ರವೆಂದರೆ ಬಯಸಿದ್ದನ್ನೆಲ್ಲ ನೀಡುವ ಮಂತ್ರ. ಹೀಗೆ ಜೂಜಾಟದ ಮೋಹದಿಂದ ತನ್ನೆಲ್ಲ ಐಶ್ವರ್ಯ ವನ್ನು ಕಳೆದುಕೊಂಡ ನಳ ಮಹಾರಾಜ ಪಡಬಾರದ ಕಷ್ಟಪಟ್ಟು ಕೊನೆಗೂ ತನ್ನ ರಾಜ ವೈಭೋಗಕ್ಕೆ ಮರಳಿದನು. ಆದರೆ ಸಾಮಾನ್ಯರಾದ ನಮ್ಮ ಗತಿ ಏನು? ಜೂಜಾಟದ ಆಮಿಷಕ್ಕೆ ಬಿದ್ದ ಯುವಕರು ಜೀವನವನ್ನೇ ಹಾಳು ಮಾಡಿ ಕೊಳ್ಳುತ್ತಾರೆ. ಇನ್ನು ಸುಲಭ ದನದ ಆಸೆಗೆ ಅನೇಕರು ತಾವು ದುಡಿದ ಹಣವನ್ನ ಜೂಜಿನಲ್ಲಿ ಕಳೆದು ಮನೆಯವ ರನ್ನೂ ಕಷ್ಟಕ್ಕೆ ದೂಡುತ್ತಾರೆ.
ಜೀವನದಲ್ಲಿ ಸುಖವಾಗಿ ಬದುಕಲು ಯಾವುದೇ ವಾಮ ಮಾರ್ಗಗಳಿಲ್ಲ. ಅಲ್ಲಿ ಪರಿಶ್ರಮ ಪಟ್ಟಾಗ ಮಾತ್ರ ಪ್ರತಿಫಲ
ದೊರೆಯುತ್ತದೆ.
ಇದನ್ನೂ ಓದಿ: #RoopaGururaj