Sunday, 11th May 2025

ಕಾಣೆಯಾದ ಮುದ್ದಿನ ಗಿಣಿ: ಹುಡುಕಿಕೊಟ್ಟವರಿಗೆ ಬಹುಮಾನ

ತುಮಕೂರು: ಮುದ್ದಿನಿಂದ ಸಾಕಿದ್ದ ಗಿಣಿಯೊಂದು ದಿಢೀರ್ ಕಾಣೆಯಾಗಿದ್ದು, ಅದರ ಮಾಲೀಕರು ಕಂಗಾಲಾಗಿದ್ದಾರೆ.

ಮಾತ್ರವಲ್ಲ, ಮನೆ ಮಗುವಂತೆ ಸಾಕಿರುವ ಗಿಳಿಯನ್ನ ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ ನೀಡೋದಾಗಿ ಮಾಲೀಕರು ಘೋಷಣೆ ಮಾಡಿದ್ದಾರೆ.

ತುಮಕೂರು ಜಯನಗರ ನಿವಾಸಿ ರವಿ ಕುಟುಂಬ ಆಫ್ರಿಕನ್ ಗ್ರೇ ಜಾತಿಯ ಎರಡು ಗಿಳಿಯನ್ನ ಸಾಕಿತ್ತು. ಅದಕ್ಕೆ ರುಸ್ತುಮಾ ಎಂದು ನಾಮಕರಣ ಮಾಡಲಾಗಿತ್ತು. ಎರಡೂ ವರೆ ವರ್ಷದಿಂದ ಗಿಣಿಗಳನ್ನು ಪ್ರೀತಿಯಿಂದ ಸಾಕಿದ್ದರು. ಮನೆಯವರ ಪ್ರೀತಿಗಳಿಸಿದ್ದ ಗಿಳಿ ಜುಲೈ 16ರಂದು ಕಾಣೆಯಾಗಿತ್ತು.

ಪ್ರೀತಿಯ ಗಿಣಿ ನಾಪತ್ತೆಯಾಗಿರುವುದಕ್ಕೆ ರವಿ ಕುಟುಂಬ ಕಣ್ಣೀರು ಇಡುತ್ತಿದೆ. ಹಗಲು-ರಾತ್ರಿ ಎನ್ನದೇ ಗಿಳಿಗಾಗಿ ಹುಡುಕಾಟ ನಡೆಸುತ್ತಿದೆ ಕುಟುಂಬ. ಮಾತ್ರವಲ್ಲ, ತುಮಕೂರು ನಗರದಲ್ಲಿ ಬ್ಯಾನರ್ ಹಾಕಿ ಸಾರ್ವಜನಿಕರ ಬಳಿಯೂ ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದೆ. ಗಿಣಿಯನ್ನ ಹುಡುಕಿಕೊಟ್ಟವರಿಗೆ 25 ಸಾವಿರ ರುಪಾಯಿ ಬಹುಮಾನ ನೀಡೋದಾಗಿ ಆ ಕುಟುಂಬ ಘೋಷಣೆ ಮಾಡಿದೆ.

ಗಿಳಿ ಹುಡುಕಿಕೊಟ್ಟರೆ 50 ಸಾವಿರ ರೂಪಾಯಿ ಕೊಡುವುದಾಗಿ ಪತ್ರಿಕೆಗಳಲ್ಲಿ ಹಾಕಿರುವ ಜಾಹೀರಾತು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿದೆ.