Wednesday, 14th May 2025

ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್ ?

ಕೋಝಿಕ್ಕೋಡ್: ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕೇರಳದಲ್ಲಿ ತುರ್ತು ಲ್ಯಾಂಡಿಂಗ್ ಆದ ಘಟನೆ ಇಂದು ನಡೆದಿದೆ.

ಕಾರ್ಗೋ ಬೋಗಿಯಲ್ಲಿ ಬೆಂಕಿ ಅವಘಡದ ಮುನ್ನೆಚ್ಚರಿಕೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕೋಳಿಕ್ಕೋಡಿ ನಲ್ಲಿ ಶುಕ್ರವಾರ ತುರ್ತು ಲ್ಯಾಂಡಿಂಗ್ ಆಗಿದೆ.

ವಿಮಾನ ಕಲ್ಲಿಕೋಟೆಯಿಂದ ಕುವೈತ್ ಗೆ ಹೊರಟಿತ್ತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಾರ್ಗೊ ಬೋಗಿಯಲ್ಲಿ ಬೆಂಕಿ ಅವಘಡದ ಸೂಚನೆ ಪೈಲಟ್ ಗೆ ಸಿಕ್ಕಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕೋಳಿಕ್ಕೋಡಿನಲ್ಲಿ ಇಂದು ಬೆಳಗ್ಗೆ ತುರ್ತು ಲ್ಯಾಂಡಿಂಗ್ ಆಗಿದೆ.

17 ಪ್ರಯಾಣಿಕರಿದ್ದ ವಿಮಾನ ಕಲ್ಲಿಕೋಟೆಯಿಂದ ಕುವೈತ್ ಗೆ ಹೊರಟಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *