Sunday, 11th May 2025

ನೋಟಿಸ್‌ಗೆ ಪ್ರತಿಕ್ರಿಯಿಸದ ಯತ್ನಾಳ್‌ಗೆ ಕಟೀಲ್ ಎಚ್ಚರಿಕೆ

ಯಾದಗಿರಿ: ಪಕ್ಷದ ಶಿಸ್ತು ಸಮಿತಿ ನೀಡುವ ಪ್ರತಿ ನೋಟಿಸ್‌ಗೆ ಉತ್ತರಿಸುವುದು ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರ ಕರ್ತವ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ವಿಜಯಪುರದ ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಾಳ್ ಅವರು ಪ್ರವಾಹ ಪರಿಹಾರಕ್ಕಾಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಾಗಿ ಅವರಿಗೆ ಪಕ್ಷ ನೀಡಿದ್ದ ಶೋಕಾಸ್ ನೋಟಿಸ್‌ಗೆ ಸ್ಪಂದಿಸದ ಬೆನ್ನಲ್ಲೇ ಕಟೀಲ್ ಈ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಾಳ್ ಅವರ ಚಟುವಟಿಕೆಗಳನ್ನು ರಾಷ್ಟ್ರೀಯ ನಾಯಕತ್ವದಿಂದ ಮೇಲ್ವಿಿಚಾರಣೆ ಮಾಡಲಾಗುತ್ತದೆ ಮತ್ತು ಚೆಂಡು ಅವರ ಕೈಯ್ಯಲ್ಲಿರುವುದರಿಂದ ಯಾವ ಕ್ರಮ ಬೇಕು ಎಂದು ಅವರು ನಿರ್ಧರಿಸುತ್ತಾಾರೆ. ನೋಟಿಸ್‌ಗೆ ಪ್ರತಿಕ್ರಿಿಯಿಸಲು ಯತ್ನಾಾಳ್ ವಿಫಲವಾದರೆ ಕ್ರಮ ತೆಗೆದುಕೊಳ್ಳಬಹುದು ಹಾಗೂ ಯಾವುದೇ ಪ್ರತಿಕ್ರಿಿಯೆ ನೀಡದಿರುವುದು ದುರಹಂಕಾರವಾಗುತ್ತದೆ ಎಂದರು.

Leave a Reply

Your email address will not be published. Required fields are marked *