Sunday, 11th May 2025

Vijayapura News: ಕನ್ನಡ ನಾಡು ನುಡಿ ಸಂಭ್ರಮ ದಿನಾಚರಣೆ

ಇಂಡಿ: ಪಟ್ಟಣದ ಹೃದಯಭಾಗದಲ್ಲಿರುವ ಎಸ್.ಎಸ್ ವ್ಹಿ ವಿ ಎಸ್ ಸಂಘದ ಅಡಿಯಲ್ಲಿ ಶ್ರೀಮತಿ ಶಾಲಿನಿ ಮಾಣಿಕಚಂದ್ ದೋಶಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ಸಾಹಿತ್ಯ ಸಂಗಮ ಇಂಡಿ ವತಿಯಿಂದ ಕನ್ನಡ ನಾಡು ನುಡಿ ಸಂಭ್ರಮ ದಿನಾಚರಣೆ ಆಚರಿಸಲಾಯಿತು.

ಪ್ರಾಚಾರ್ಯ ಎ.ಬಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆ ಭಾಷೆಗಳ ಮಹಾತಾಯಿ ಕನ್ನಡ ಭಾಷೆಗೆ ಇರುವಷ್ಟು ಶ್ರೀಮಂತಿಕೆ ಬೇರೆ ಭಾಷಗಳಿಗೆ ಇಲ್ಲ. ಕನ್ನಡ ಮಾತನಾಡಲು ಓದಲು ಸರಳ ಸುಲಲೀತ ಭಾಷೆಯಾಗಿದೆ. ೧೯೭೩ರಲ್ಲಿ ಅಧಿಕೃತ ಕರ್ನಾಟಕ ಎಂದು ನಾಮಕರಣವಾಯಿತು. ಕನ್ನಡ ಭಾಷೆಗೆ ಕನ್ನಡ ಲಿಪಿಗಳ ರಾಣಿ ಎಂದು ವ್ಯಾಖ್ಯಾನಿಸಿದ್ದಾರೆ.

ಉಪನ್ಯಾಸಕ ವಿಜಯಕುಮಾರ ರಾಠೋಡ, ಶಿಕ್ಷಕಿ ಫರಹ ಸೇರಿದಂತೆ ಅನೇಕ ಶಿಕ್ಷಕ ಸಿಬ್ಬಂದಿಗಳು ಬಂಧುಬಾಂಧವರು ಇದ್ದರು.

ಇದನ್ನೂ ಓದಿ: Vijayapura News