Sunday, 11th May 2025

41 ರಾಜತಾಂತ್ರಿಕರು ಕೆನಡಾಕ್ಕೆ ವಾಪಾಸ್

ಕೆನಡಾ: ಭಾರತ ಸರ್ಕಾರ ನೀಡಿದ್ದ ಗಡುವಿಗೆ ಒಂದು ದಿನ ಮುಂಚಿತವಾಗಿಯೇ ರಾಜಧಾನಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 41 ರಾಜತಾಂತ್ರಿಕ ರನ್ನು ಕೆನಡಾ ವಾಪಾಸ್ ಕರೆಸಿಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವ ಮೆಲಾನಿ ಜೋಲಿ, ಒಂದು ವೇಳೆ ಗಡುವು ಮುಗಿದರೆ ಅವರು ರಾಜತಾಂತ್ರಿಕ ವಿನಾಯಿತಿಯನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಬಗ್ಗೆ ಯಾವುದೇ ಪ್ರತಿಸ್ಪಂದನೆ ಮಾಡದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ನಮ್ಮ ರಾಜತಾಂತ್ರಿಕರ ಸುರಕ್ಷತೆಯ ಮೇಲೆ ಭಾರತದ ಕ್ರಮಗಳ ಪರಿಣಾಮಗಳನ್ನು ಗಮನಿಸಿದರೆ, ಅವರು ಭಾರತದಿಂದ ಸುರಕ್ಷಿತವಾಗಿ ನಿರ್ಗಮಿಸಲು ನಾವು ಅನುಕೂಲ ಮಾಡಿದ್ದೇವೆ.

ಭಾರತವು ಈಗ ಹೊರಹಾಕುತ್ತಿರುವ ಪ್ರತಿಯೊಬ್ಬ ಕೆನಡಾದ ರಾಜತಾಂತ್ರಿಕರಿಗೆ ಮಾನ್ಯತೆ ನೀಡಿದೆ. ಮತ್ತು ಆ ರಾಜತಾಂತ್ರಿಕರು ತಮ್ಮ ಕರ್ತವ್ಯಗಳನ್ನು ಉತ್ತಮ ನಂಬಿಕೆಯಿಂದ ಮತ್ತು ಎರಡೂ ದೇಶಗಳಿಗೆ ಹೆಚ್ಚಿನ ಪ್ರಯೋಜನಕ್ಕಾಗಿ ನಿರ್ವಹಿಸುತ್ತಿದ್ದರು ಎಂದು ಜೋಲಿ ತಿಳಿಸಿದ್ದಾರೆ.

ಕೆನಡಾ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುತ್ತದೆ. ಇದು ಎಲ್ಲಾ ದೇಶಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಕೆನಡಾವು ಭಾರತದಲ್ಲಿ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಮುಂದುವರಿಸುತ್ತದೆ. ಈ ನಿಟ್ಟಿನಲ್ಲಿ, ನಾವು ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ವಲಸೆ, ನಿರಾಶ್ರಿತರ ಮತ್ತು ಪೌರತ್ವ ಸಚಿವ ಮಾರ್ಕ್ ಮಿಲ್ಲರ್ ಮಾತನಾಡಿ, ಮುಂದಿನ ಸೂಚನೆ ಬರುವವರೆಗೆ ಚಂಡೀಗಢ, ಬೆಂಗಳೂರು ಮತ್ತು ಮುಂಬ ಯಿನಲ್ಲಿರುವ ಕೆನಡಾ ದೂತಾವಾಸಗಳಲ್ಲಿ ವೈಯಕ್ತಿಕ ಸೇವೆಗಳನ್ನು ವಿರಾಮಗೊಳಿಸಬೇಕು. ಕಡಿಮೆ ಸಿಬ್ಬಂದಿ ಕೆಲವೊಂದು ಕರ್ತವ್ಯಗಳನ್ನಷ್ಟೇ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *