Saturday, 10th May 2025

ದ.ಕನ್ನಡದಲ್ಲಿ 7, ಉಡುಪಿಯಲ್ಲಿ ಮೂರು ನಾಮಪತ್ರಗಳು ತಿರಸ್ಕೃತ

ಮಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಶುಕ್ರವಾರ ನಡೆದ ನಾಮಪತ್ರಗಳ ಪರಿಶೀಲನೆಯ ನಂತರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಮತ್ತು ಉಡುಪಿಯಲ್ಲಿ ಮೂರು ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ 72 ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಲಾಗಿದ್ದು, ಉಡುಪಿಯಲ್ಲಿ ನಿಗದಿತ ನಮೂನೆಯ ಪ್ರಕಾರ ಪೂರ್ಣಗೊಂಡಿ ರುವ ಪತ್ರಗಳ ಸಂಖ್ಯೆ 39 ಆಗಿದೆ.
ಆರಂಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕ್ರಮವಾಗಿ 109 ಮತ್ತು 88 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಒಂದು ಹಾಗೂ ಮಂಗಳೂರು ದಕ್ಷಿಣ, ಮಂಗಳೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ತಲಾ ಎರಡು ನಾಮಪತ್ರಗಳು ತಿರಸ್ಕೃತ ಗೊಂಡಿವೆ. ಉಡುಪಿಯಲ್ಲಿ ಕುಂದಾಪುರ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ ಶಂಕರ ಅಂಕದಕಟ್ಟೆ, ಕಾರ್ಕಳ ಕ್ಷೇತ್ರಕ್ಕೆ ಉದಯಕುಮಾರ್ ಎಂ, ದಯಾನಂದ ಶೆಟ್ಟಿ ಅವರ ನಾಮಪತ್ರ ತಿರಸ್ಕೃತಗೊಂಡಿವೆ.
ಬೆಳ್ತಂಗಡಿಯಲ್ಲಿ ಹತ್ತು, ಮೂಡುಬಿದಿರೆಯಲ್ಲಿ ಒಂಬತ್ತು, ಮಂಗಳೂರು ನಗರ ಉತ್ತರದಲ್ಲಿ 12, ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರಿ ನಲ್ಲಿ ತಲಾ ಎಂಟು, ಬಂಟ್ವಾಳದಲ್ಲಿ ಆರು, ಪುತ್ತೂರಿನಲ್ಲಿ 10 ಮತ್ತು ಸುಳ್ಯದಲ್ಲಿ ಒಂಬತ್ತು ನಾಮಪತ್ರಗಳು ನಿಗದಿತ ನಮೂನೆಯಲ್ಲಿದ್ದು, ಅಂಗೀಕಾರಗೊಂಡಿವೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.