Saturday, 10th May 2025

Tumkur Crime: ರೇಣುಕಾ ಸ್ವಾಮಿ ಕೊಲೆ-ಮೂವರು ಆರೋಪಿಗಳು ಬಿಡುಗಡೆ

ತುಮಕೂರು: ನಗರದ ಊರುಕೆರೆ ಜೈಲಿನಲ್ಲಿದ್ದ ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳು ಜೈಲಿ ನಿಂದ ಬಿಡುಗಡೆಯಾಗಿದ್ದಾರೆ.

A- 16 ಕೇಶವಮೂರ್ತಿ, A-15 ಕಾರ್ತಿಕ್, A-17 ನಿಖಿಲ್ ನಾಯಕ್ ತುಮಕೂರು ಜೈಲಿನಿಂದ ಬುಧವಾರ ಬೆಳಗ್ಗೆ ಬಿಡುಗಡೆಯಾಗಿದ್ದಾರೆ.

ಕಳೆದ ತಿಂಗಳ ಸೆಪ್ಟೆಂಬರ್ 23 ರಂದು ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. 10 ದಿನಗಳ ಬಳಿಕ ಮೂವರು ಹೊರ ಬಂದಿದ್ದಾರೆ. ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ಸಿಕ್ಕರೆ ಆರೋಪಿ ನಿಖಿಲ್ ನಾಯಕ್‌ ಹಾಗೂ ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು.

ಕೋರ್ಟ್‌ನಲ್ಲಿ ಜಾಮೀನು ಸಿಕ್ಕರೂ ಶೂರಿಟಿದಾರರು ಸಿಗದೇ ಪರದಾಟ ನಡೆಸಿದ್ದರು. ಸತತ 9 ದಿನಗಳಿಂದ ಶೂರಿಟಿ ದಾರರು ಸಿಗದೇ ಕುಟುಂಬಸ್ಥರು ಸಂಕಷ್ಟ ಎದುರಿಸಿದ್ದರು. ಮಂಗಳವಾರ ಜಾಮೀನು ಶೂರಿಟಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಬುಧವಾರ ಬಿಡುಗಡೆ ಪ್ರಕ್ರಿಯೆ ಮುಗಿಸಿ ಮೂವರು ಆರೋಪಿಗಳು ಜೈಲಿನಿಂದ ರಿಲೀಸ್ ಆಗಿದ್ದಾರೆ.

ಇದನ್ನೂ ಓದಿ: Chikkaballapur Crime: ಸಿಲ್ವರ್ ಕೆಫೆ ಮುಂಭಾಗ ಆಟೋ ಬೈಕ್ ನಡುವೆ ಮುಖಾಮುಖಿ ಡಿಕ್ಕಿ