ತುಮಕೂರು: ಕಲ್ಪತರು ನಾಡಿನ ಕದನ ದಿನೇ ದಿನೇ ರಂಗೇರುತ್ತಿದೆ. ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ 23 ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, 131 ಕಲಿಗಳು ಕಣದಲ್ಲಿ ಕಾದಾಟ ನಡೆಸಲು ಸಿದ್ದವಾಗಿದ್ದಾರೆ.
ಚಿ.ನಾ.ಹಳ್ಳಿ ಕ್ಷೇತ್ರ:13 ರಣಕಲಿಗಳು
ಕಾಂಗ್ರೆಸ್ ಪಕ್ಷದ ಕೆ.ಎಸ್.ಕಿರಣ್ ಕುಮಾರ್, ಆಮ್ ಆದ್ಮಿ ಪಕ್ಷದ ನಿಂಗರಾಜು ಎಸ್.ಸಿ., ಬಿಜೆಪಿ ಜೆ.ಸಿ.ಮಾಧುಸ್ವಾಮಿ, ಜೆಡಿಎಸ್ ಪಕ್ಷದ ಸಿ.ಬಿ.ಸುರೇಶ್ ಬಾಬು, ಉತ್ತಮ ಪ್ರಜಾಕೀಯ ಪಕ್ಷದ ಜಯರಾಮ್ ಎಚ್.ಆರ್., ಭಾರತೀಯ ಬಹುಜನ ಕ್ರಾಂತಿ ದಳದ ಎಚ್.ಟಿ. ನಾಗರಾಜು, ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಕ್ಷದ ಎಂ.ಕೆ.ಪಾಷ, ಕೆ.ಆರ್.ಎಸ್ ಪಕ್ಷದ ಮಲ್ಲಿಕಾರ್ಜು ನಯ್ಯ ಬಿ.ಎಸ್., ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯ್ಕ ಎಂ.ಬಿ., ಪಕ್ಷೇತರರಾದ ಕ್ಯಾಪ್ಟನ್ ಸೋಮಶೇಖರ್, ಗಂಗಾಧರಯ್ಯ, ಗಿರೀಶ್ ಆರ್., ನಾಸೀರ್ ಬೇಗ್ ಎಂ., ಸೇರಿ 13 ಮಂದಿ ಕಣದಲ್ಲಿದ್ದಾರೆ.
ತಿಪಟೂರು ಕ್ಷೇತ್ರ-12 ಅಭ್ಯರ್ಥಿಗಳು
ಆಮ್ ಆದ್ಮಿ ಪಕ್ಷದ ಟಿ.ಎಸ್. ಚಂದ್ರಶೇಖರ್, ಬಿಜೆಪಿ ಬಿ.ಸಿ. ನಾಗೇಶ್, ಜೆಡಿಎಸ್ ಪಕ್ಷದ ಕೆ.ಟಿ. ಶಾಂತಕುಮಾರ್, ಕಾಂಗ್ರೆಸ್ ಪಕ್ಷದ ಕೆ. ಷಡಾಕ್ಷರಿ, ಕನ್ನಡ ದೇಶದ ಪಕ್ಷದ ಅರುಣ್ ಲಿಂಗ, ಉತ್ತಮ ಪ್ರಜಾಕೀಯ ಪಕ್ಷದ ಗಿರೀಶ ಎಸ್.ಬಿ., ಕೆ.ಆರ್.ಎಸ್ ಪಕ್ಷದ ಗಂಗಾಧರಯ್ಯ ಕೆ.ಎಸ್., ಭಾರತೀಯ ಬಹುಜನ ಕ್ರಾಂತಿ ದಳದ ಆರ್.ಎಂ. ಮಲ್ಲಿಕಾರ್ಜುನಸ್ವಾಮಿ, ಪಕ್ಷೇತರರಾದ ಅನಂತ ಶಯನ ಎ.ಟಿ., ಟಿ.ಎನ್. ಕುಮಾರಸ್ವಾಮಿ, ಬಂಡೆ ರವಿ, ಬಿ.ಎನ್. ವಿಜಯಕುಮಾರ್, ಸೇರಿದಂತೆ 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ತುರುವೇಕೆರೆ ಕ್ಷೇತ್ರ:11 ಮಂದಿ
ಕಾಂಗ್ರೆಸ್ ಪಕ್ಷದ ಕಾಂತರಾಜ್ ಬಿ.ಎಂ., ಜೆ.ಡಿ.ಎಸ್ ಪಕ್ಷದ ಎಂ.ಟಿ.ಕೃಷ್ಣಪ್ಪ, ಬಿಜೆಪಿ ಮಸಾಲ ಜಯರಾಮ್, ಆಮ್ ಆದ್ಮಿ ಪಕ್ಷದ ಜಯರಾಮ್ ಜಿ.ಸಿ., ಬಹುಜನ ಸಮಾಜ ಪಕ್ಷದ ಶ್ರೀನಿವಾಸ ಎಂ.ಸಿ., ಭಾರತೀಯ ಬಹುಜನ ಕ್ರಾಂತಿ ದಳದ ಹೆಚ್.ಬಿ.ಪುಟ್ಟಪ್ಪ, ಉತ್ತಮ ಪ್ರಜಾಕೀಯ ಪಕ್ಷದ ಭರತ್ ಎಸ್., ಕೆ.ಆರ್.ಎಸ್ ಪಕ್ಷದ ರಾಮ್ ಪ್ರಸಾದ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ ಪಕ್ಷದ ಹಟ್ಟಯ್ಯ ಎನ್., ಪಕ್ಷೇತರರಾದ ಕಪನಿಗೌಡ, ನಾರಾಯಣ, ಸೇರಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕುಣಿಗಲ್ ಕ್ಷೇತ್ರ:8 ಕಲಿಗಳು
ಬಿಜೆಪಿ ಡಿ.ಕೃಷ್ಣಕುಮಾರ್, ಆಮ್ ಆದ್ಮಿ ಪಕ್ಷದ ಹೆಚ್.ಎ.ಜಯರಾಮಯ್ಯ, ಜೆ.ಡಿ.ಎಸ್ ಪಕ್ಷದ ಡಾ: ರವಿ ಬಿ.ಎನ್., ಕಾಂಗ್ರೆಸ್ ಪಕ್ಷದ ರಂಗನಾಥ್ ಎಚ್.ಡಿ., ಕೆ.ಆರ್.ಎಸ್ ಪಕ್ಷದ ರಘು ಜೆ.ಎಸ್., ರಾಷ್ಟ್ರೀಯ ಜನಹಿತ ಪಕ್ಷದ ರಮೇಶ್ ಎಸ್.ಬಿ., ಸ್ವತಂತ್ರ ಅಭ್ಯರ್ಥಿಗಳಾದ ಬಿ.ಟಿ.ತಿರುಮಲೇಗೌಡ, ಬಿ.ಬಿ.ರಾಮಸ್ವಾಮಿಗೌಡ, ಸೇರಿದಂತೆ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತುಮಕೂರು ನಗರ ಕ್ಷೇತ್ರ:14 ರಣಕಲಿಗಳು
ಕಾಂಗ್ರೆಸ್ ಪಕ್ಷದ ಇಕ್ಬಾಲ್ ಅಹ್ಮದ್, ಜೆ.ಡಿ.ಎಸ್ ಪಕ್ಷದ ಎನ್. ಗೋವಿಂದರಾಜು, ಬಿಜೆಪಿ ಜಿ.ಬಿ.ಜ್ಯೋತಿಗಣೇಶ್, ಬಹುಜನ ಸಮಾಜ ಪಕ್ಷದ ಕೆ.ಬಿ.ದಿನೇಶ್ ಬಾಬು, ಆಮ್ ಆದ್ಮಿ ಪಕ್ಷದ ಮೊಹಮ್ಮದ್ ಗೌಸ್ ಪೀರ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಎಂ.ವಿ.ಕಲ್ಯಾಣಿ, ಕೆ.ಆರ್.ಎಸ್ ಪಕ್ಷದ ಗಜೇಂದ್ರ ಕುಮಾರ್ ಗೌಡ, ಉತ್ತಮ ಪ್ರಜಾಕೀಯ ಪಕ್ಷದ ಟಿ.ಎನ್.ರಾಜೇಶ್, ಪಕ್ಷೇತರರಾದ ಮಾಜಿ ಸಚಿವ ಎಸ್.ಶಿವಣ್ಣ, ಕುಮಾರ್ ಎಸ್., ದಾದಾಪೀರ್, ನರಸೇಗೌಡ, ಪ್ರಕಾಶ್ ಆರ್.ಎ.ಜೈನ್, ವೀರೇಶ ಪ್ರಸಾದ್ ಸೇರಿದಂತೆ 14 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರ -13 ಕಲಿಗಳು
ಜೆ.ಡಿ.ಎಸ್ ಪಕ್ಷದ ಡಿ.ಸಿ.ಗೌರಿಶಂಕರ್ ಸ್ವಾಮಿ, ಆಮ್ ಆದ್ಮಿ ಪಕ್ಷದ ದಿನೇಶ್ ಕುಮಾರ್ ಬಿ., ಕಾಂಗ್ರೆಸ್ ಪಕ್ಷದ ಜಿ.ಎಚ್.ಷಣ್ಮುಖಪ್ಪ, ಬಿಜೆಪಿ ಬಿ.ಸುರೇಶ್ ಗೌಡ, ಕೆ.ಆರ್.ಎಸ್ ಪಕ್ಷದ ವಿ.ಎ.ಆನಂದ್, ಸೋಶಿಯಾಲಿಸ್ಟ್ ಪಾರ್ಟಿ(ಇಂಡಿಯಾ)ಯ ಡಿ.ಗೋಪಾಲಕ್ರಿಷ್ಣ, ಉತ್ತಮ ಪ್ರಜಾಕೀಯ ಪಕ್ಷದ ದಿನೇಶ್ ಟಿ.ಎನ್., ಇಂಡಿಯನ್ ಮೂವ್ಮೆಂಟ್ ಪಕ್ಷದ ನಿಸ್ಸಾರ ಅಹಮ್ಮದ್, ಪಕ್ಷೇತರರಾದ ಅಶೋಕ ಕೆ.ಎಸ್., ಎಸ್.ಟಿ. ಗೋವಿಂದಯ್ಯ, ಯೋಗನರಸಿಂಹ ಮೂರ್ತಿ ಟಿ.ಹೆಚ್. ಕೆ.ವಿ.ಶ್ರೀನಿವಾಸ್ ಕಲ್ಕೆರೆ, ಸಿದ್ಧರಾಮೇಗೌಡ ಸೇರಿದಂತೆ 13 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಕೊರಟಗೆರೆ ಕ್ಷೇತ್ರ: 12 ಯುದ್ದಾಳುಗಳು
ಜೆ.ಡಿ.ಎಸ್ ಪಕ್ಷದ ಪಿ.ಆರ್.ಸುಧಾಕರ್ಲಾಲ್, ಬಿಜೆಪೊ ಬಿ.ಎಚ್. ಅನಿಲ್ ಕುಮಾರ್, ಕಾಂಗ್ರೆಸ್ ಪಕ್ಷದ ಡಾ: ಜಿ.ಪರಮೇಶ್ವರ, ಆಮ್ ಆದ್ಮಿ ಪಕ್ಷದ ಡಿ.ಹನುಮಂತರಾಯಪ್ಪ, ಬಹುಜನ ಸಮಾಜ ಪಕ್ಷದ ಎಸ್.ಜಿ. ಮಂಜುನಾಥ, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ರವಿಕುಮಾರ್ ಕೆ.ಸಿ., ಉತ್ತಮ ಪ್ರಜಾಕೀಯ ಪಕ್ಷದ ನಾಗೇಂದ್ರ ಟಿ.ಎನ್., ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಯ್ಯ ಎನ್., ಪಕ್ಷೇತರರಾದ ಮುನಿಯಪ್ಪ ಕೆ.ಎಂ., ಬಿ.ಎನ್. ವಿಜಯಲಕ್ಷ್ಮಿ, ವಿ.ಶಾಂತಕುಮಾರ್, ಹನುಮಂತರಾಯಪ್ಪ, ಸೇರಿದಂತೆ 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಗುಬ್ಬಿ ಕ್ಷೇತ್ರ:10 ಕಲಿಗಳು
ಬಿಜೆಪಿ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಪಕ್ಷದ ನಾಗರಾಜು ಬಿ.ಎಸ್., ಆಮ್ ಆದ್ಮಿ ಪಕ್ಷದ ಪ್ರಭು ಸ್ವಾಮಿ ಬಿ.ಎಸ್., ಬಹುಜನ ಸಮಾಜ ಪಕ್ಷದ ಶಿವಣ್ಣ, ಕಾಂಗ್ರೆಸ್ ಪಕ್ಷದ ಎಸ್.ಆರ್.ಶ್ರೀನಿವಾಸ್, ಕೆ.ಆರ್.ಎಸ್ ಪಕ್ಷದ ಪ್ರವೀಣಗೌಡ ಚೇಳೂರು., ಪಕ್ಷೇತರರಾದ ಹೆಚ್.ಹೆಚ್.ಗಿರಿಯಪ್ಪ, ಡಾ: ಭಾವನಾ ಆರ್. ಗಿರಿಧರ್, ವೀರೇಶ್ ಪ್ರಸಾದ್ ಆರ್., ಟಿ.ವಿ. ಶ್ರೀನಿವಾಸ್ ಸೇರಿದಂತೆ 10 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಶಿರಾ ಕ್ಷೇತ್ರ:15 ವೀರರು
ಜೆ.ಡಿ.ಎಸ್ ಪಕ್ಷದ ಆರ್.ಉಗ್ರೇಶ್, ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ, ಬಹುಜನ ಸಮಾಜ ಪಕ್ಷದ ನಟರಾಜು ಎನ್.ಕೆ., ಬಿಜೆಪಿ ಸಿ.ಎಂ.ರಾಜೇಶ್ ಗೌಡ, ಆಮ್ ಆದ್ಮಿ ಪಕ್ಷದ ಶಶಿಕುಮಾರ್ ಆರ್., ಉತ್ತಮ ಪ್ರಜಾಕೀಯ ಪಕ್ಷದ ಅಶೋಕ, ಡಾ: ಅಂಬೇಡ್ಕರ್ ಪೀಪಲ್ಸ್ ಪಕ್ಷದ ಎನ್.ಕುಮಾರ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಗಿರೀಶ್, ಸ್ವಯಂ ಕೃಷಿ ಪಕ್ಷದ ಕೆ.ಟಿ.ಗುಂಡರಾಜ್, ಕೆ.ಆರ್.ಎಸ್ ಪಕ್ಷದ ಪ್ರದೀಪ್ ಕುಮಾರ್, ಸ್ವತಂತ್ರ ಅಭ್ಯರ್ಥಿಗಳಾದ ಎಸ್.ಎನ್.ಕಾಂತರಾಜು, ಬಂಡಿ ರಂಗನಾಥ ವೈ.ಆರ್., ಬಿ.ಎ.ಮಂಜುನಾಥ, ರಂಗನಾಥ, ರಂಗನಾಥಯ್ಯ ವೈ.ಜಿ., ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಪಾವಗಡ ಕ್ಷೇತ್ರ:11 ಅಭ್ಯರ್ಥಿಗಳು
ಆಮ್ ಆದ್ಮಿ ಪಕ್ಷದ ಎನ್.ರಾಮಾಂಜಿನಪ್ಪ, ಕಾಂಗ್ರೆಸ್ ಪಕ್ಷದ ಎಚ್.ವಿ.ವೆಂಕಟೇಶ್, ಜೆ.ಡಿ.ಎಸ್ ಪಕ್ಷದ ಕೆ.ಎಂ.ತಿಮ್ಮರಾಯಪ್ಪ, ಬಿಜೆಪಿ ಕೃಷ್ಣನಾಯ್ಕ್, ಬಹುಜನ ಸಮಾಜ ಪಕ್ಷದ ಟಿ. ಹನುಮಂತರಾಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಗೇಂದ್ರ ಕುಮಾರ್, ಭಾರತೀಯ ಬಹುಜನ ಕ್ರಾಂತಿ ದಳದ ಬಿ.ಟಿ. ರಾಮಸುಬ್ಬಯ್ಯ, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್., ಪಕ್ಷೇತರರಾದ ಗೋವಿಂದಪ್ಪ ವಿ., ಶ್ರೀನಿವಾಸ ಎಸ್.ಎಚ್., ನಾಗರಾಜಪ್ಪ, ಸೇರಿದಂತೆ 11 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಮಧುಗಿರಿ ಕ್ಷೇತ್ರ: 12 ರಣಕಲಿಗಳು
ಕಾಂಗ್ರೆಸ್ ಪಕ್ಷದ ಕೆ.ಎನ್.ರಾಜಣ್ಣ, ಬಿಜೆಪಿ ಎಲ್.ಸಿ.ನಾಗರಾಜ, ಬಹುಜನ ಸಮಾಜ ಪಕ್ಷದ ಎನ್. ಮಧು, ಜೆ.ಡಿ.ಎಸ್ ಪಕ್ಷದ ಎಂ.ವಿ.ವೀರಭದ್ರಯ್ಯ, ಆಮ್ ಆದ್ಮಿ ಪಕ್ಷದ ಸೈಯದ್ ಮುಜಾಮಿಲ್ ಪಾಷ, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಕೆ.ಆರ್.ಎಸ್. ಜಯಂತ್, ಉತ್ತಮ ಪ್ರಜಾಕೀಯ ಪಕ್ಷದ ಮುದ್ದುರಾಜು ಜಿ. ಪ್ರಜಾಕೀಯ, ಲೋಕಶಕ್ತಿ ಪಕ್ಷದ ರಂಗನಾಥ ಆರ್.ಎಸ್., ಜೈ ಮಹಾಭಾರತ್ ಪಕ್ಷದ ವೆಂಕಟೇಶ, ಪಕ್ಷೇತರರಾದ ಧನುಷ್ ಕುಮಾರ್ ಬಿ.ಕೆ., ಜಿ.ಹೆಚ್.ಮಾರುತಿ, ಲಕ್ಷ್ಮಿ ನಾರಾಯಣಪ್ಪ ಸೇರಿದಂತೆ 12 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಮುಖ್ಯಾಂಶಗಳು
*131 ಮಂದಿ ಅಂತಿಮವಾಗಿ ಕಣದಲ್ಲಿದ್ದಾರೆ.
*ಒಟ್ಟು 128 ಪುರುಷ ಕಲಿಗಳು ಸ್ಪರ್ಧೆ.
* 3 ಮಹಿಳಾ ಅಭ್ಯರ್ಥಿಗಳು ಕಣದಲ್ಲಿ ಪೈಪೋಟಿ.
*ಬಿಜೆಪಿ, ಕಾಂಗ್ರೆಸ್, ಜೆಡಿಎಸ್,ಎಎಪಿ, ಕೆ.ಆರ್.ಎಸ್ ಪಕ್ಷದಿಂದ 11 ಕ್ಷೇತ್ರದಲ್ಲಿ ಸ್ಪರ್ಧೆ.
*ಬಿಎಸ್ಪಿ ಪಕ್ಷದಿಂದ 7 ಕ್ಷೇತ್ರ, ಸಿಪಿಐ 1 ಕ್ಷೇತ್ರ ಹಾಗೂ 42 ಕ್ಷೇತ್ರದಲ್ಲಿಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.