Wednesday, 21st May 2025

ಜನೋತ್ಸವ ಸಮಾವೇಶಕ್ಕೆ ಜಿಲ್ಲೆಯಿಂದ 30 ಸಾವಿರ ಕಾರ್ಯಕರ್ತರು ಭಾಗಿ : ರವಿಶಂಕರ್ ವಿಶ್ವಾಸ

ತುಮಕೂರು : ರಾಜ್ಯ ಬಿಜೆಪಿ ಸರಕಾರದ ಜನಪ್ರಿಯ ಯೋಜನೆ , ಸಾಧನೆಯನ್ನು ತಿಳಿಸುವ ಬೃಹತ್ ಜನೋತ್ಸವ ಸಮಾವೇಶ ದೊಡ್ಡ ಬಳ್ಳಾಪುರದಲ್ಲಿ ಸೆ.8 ರಂದು ನಡೆಯಲಿದ್ದು, ಜಿಲ್ಲೆಯಿಂದ ಸುಮಾರು  ಮೂವತ್ತು  ಸಾವಿರ ಕಾರ್ಯಕರ್ತರು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆಂದು ಜಿಲ್ಲಾಧ್ಯಕ್ಷ ಹೆಚ್.ಎಸ್. ರವಿಶಂಕರ್ ಹೆಬ್ಬಾಕ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ನೇತ್ರತ್ವದ ಸರಕಾರ ಒಂದು ವರ್ಷ ಯಶಸ್ವಿ ಯಾಗಿ ಅಭಿವೃದ್ಧಿ ಪಥದಲ್ಲಿ ಪೂರ್ಣಗೊಳಿಸಿರುವ ಸಂಧರ್ಭದಲ್ಲಿ ಸರಕಾರದಿಂದ ವಿವಿಧ ಇಲಾಖೆಗಳ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ರಾಜ್ಯ ಬಿಜೆಪಿ ಸರಕಾರ ಮೂರು ವರ್ಷಗಳ ಅಧಿಕಾರಾವಧಿ ಪೂರೈಸಿರುವ ಹಿನ್ನೆಲೆ ಯಲ್ಲಿ ಬೃಹತ್ ಜನೋತ್ಸವ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಬೃಹತ್ ಜನೋತ್ಸವ ಸಮಾವೇಶಕ್ಕೆ ತುಮಕೂರು , ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರದ ಮೂರು ಲಕ್ಷ ಕಾರ್ಯಕರ್ತರು , ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ರಾದ ಜೆ.ಪಿ.ನಡ್ಡಾ ಆಗಮಿಸಿ ಸಂದೇಶ ನೀಡಲಿದ್ದಾರೆ.
ರಾಜಾಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ , ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ , ಮುಖ್ಯಮಂತ್ರಿ ಬಸವ ರಾಜು ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು , ಸಂಸದರು, ಶಾಸಕರು , ಪದಾಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆಂದು  ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್‌.ಹುಚ್ಚಯ್ಯ, ಪ್ರಧಾನ ಕಾರ್ಯದರ್ಶಿ  ಹೆಚ್.ಟಿ.ಭೈರಪ್ಪ , ವಕ್ತಾರ ಕೆ.ಪಿ.ಮಹೇಶ , ಸಹ ವಕ್ತಾರ ಟಿ.ಜೆ.ಸನತ್ , ಮಾಧ್ಯಮ ಸಹ ಪ್ರಮುಖ್ ಜೆ.ಜಗದೀಶ್ , ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವೇದಮೂರ್ತಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಕ್ಷಿತ್   ಉಪಸ್ಥಿತರಿದ್ದರು.