Saturday, 10th May 2025

ಗ್ರಾಪಂ ಸದಸ್ಯನ ಕಗ್ಗೊಲೆ

ಹುಬ್ಬಳ್ಳಿ: ತಾಲೂಕಿನ ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ರೌಡಿಶೀಟರ್ ದೀಪಕ ಶಿವಾಜಿ ಪಟದಾರಿ (34) ಅವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯನಾಳದಲ್ಲಿ ನಡೆದಿದೆ.

ಬೈಕ್ನಲ್ಲಿ ಮನೆಗೆ ಹೊರಟ್ಟಿದ್ದ ವೇಳೆ ದೀಪಕ್ ಅವರನ್ನು ಅಡ್ಡಗಟ್ಟಿದ ಐದಕ್ಕೂ ಅಧಿಕ ಜನರು ಇದ್ದ ದುಷ್ಕಮರ್ಿಗಳ ತಂಡ ಕಲ್ಲಿನಿಂದ ತಲೆ ಹಾಗೂ ಮುಖಕ್ಕೆ ಜಜ್ಜಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ. ಇತ್ತೀಚೆಗೆ ದೀಪಕ್ ಪ್ರೇಮವಿವಾಹವಾಗಿದ್ದರು. ಜತೆಗೆ ಆಸ್ತಿ ವಿಚಾರವಾಗಿಯೂ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಡಿಸಿಪಿ ಸಾಹಿಲ್ ಬಾಗ್ಲಾ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.