Saturday, 10th May 2025

ಪ್ರಾಣಿ ಸಂಗ್ರಹಾಲಯಕ್ಕೆ ಜಿಂಕೆ ಮರಿ ಹಸ್ತಾಂತರ ಮಾಡಿದ ಗ್ರಾಪಂ ಅಧ್ಯಕ್ಷ..!

ಜಿಂಕೆ ಮರಿ ರಕ್ಷಣೆ
ಗದಗ: ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಜಿಂಕೆ ಮರಿಯೊಂದು ತಾಯಿ ಬಿಟ್ಟು ಅಗಲಿದ ಘಟನೆ ನಡೆದಿದೆ. ಹೌದು. ಬೆಳಹೋಡ ಗ್ರಾಮದ ಸಿದ್ದಪ್ಪ ಹುಲಕೋಟಿ ಹಾಗೂ ನಾಗಪ್ಪ ಕುರಡಗಿ ಎಂಬ ರೈತರು ಜಮೀನ ಕೆಲಸಕ್ಕೆಂದು ಹೋಗಿದ್ದರು. ಆ ವೇಳೆ ಜಿಂಕೆಯೊಂದು ಮರಿಯನ್ನು ಜಮೀನಲ್ಲಿ ಬಿಟ್ಟು ಹೋಗಿದೆ.
ಜಿಂಕೆ ಮರಿಯನ್ನು ಕಂಡ ರೈತರು ತಕ್ಷಣ ಹಿಡಿಕೊಂಡು ಗ್ರಾಮ ಪಂಚಾಯತಿಗೆ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಓ ಅನಿತಾ ಕೊಟ್ಟಿಗೆ ಅವರ ಕೈಯಲ್ಲಿ ಕೊಟ್ಟು ಇದನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಕೋರಿದ್ದಾರೆ.
ವಿಷಯ ತಿಳಿದ ಗ್ರಾಮ ಪಂಚಾಯತ್ ಅಧ್ಯಕ್ಷ ದಾವಲಸಾಬ್ ಹಿತ್ತಲಮನಿ ಹಾಗೂ ಸದಸ್ಯ ಗೂಳಪ್ಪ ಬೇರೆನವರ ಅವರು ಪ್ರಾಣಿ ಸಂಗ್ರಹಾಲಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು.
ಗ್ರಾಪಂ ಅಧ್ಯಕ್ಷ ದಾವಲಸಾಬ್ ಹಿತ್ತಲಮನಿ ಹಾಗೂ ಸದಸ್ಯ ಗೂಳಪ್ಪ ಅವರು ಬಿಂಕದಕಟ್ಟಿಯಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಜಿಂಕೆ ಮರಿಯನ್ನು ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಮಾನವೀಯತೆ ಮೆರೆದ ರೈತರು ಹಾಗೂ ಗ್ರಾಮ ಪಂಚಾಯಿತಿ ಯವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.