Wednesday, 14th May 2025

Chikkaballapur Crime: ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಳ್ಳರ ಕೈಚಳಕ ರೈತರಿಗೆ ಆತಂಕ ತಂದ ಕೇಬಲ್ ವೈರ್ ಕಳವು

ಚಿಂತಾಮಣಿ: ಒಂದೇ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಅಳವಡಿಸಿದ್ದ ಕೇಬಲ್ ವೈರ್ ಗಳನ್ನು ಕಳ್ಳರು ಕದ್ದು ಪರಾರಿ ಆಗಿರುವ ಘಟನೆ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಲಕ್ಷಮ್ಮ,ನಾರಾಯಣಮ್ಮ,ವೆಂಕಟಶಿವಾರೆಡ್ಡಿ,ಶ್ರೀನಿವಾಸರೆಡ್ಡಿ, ನರಸಿಂಹರೆಡ್ಡಿ,ಅವರ ತೋಟಗಳಲ್ಲಿ ವ್ಯವಸಾಯ ಮಾಡಲು ಬಳಕೆ ಮಾಡುತ್ತಿದ್ದ ಕೊಳವೆ ಬಾವಿಗಳ ಬಳಿ ಕಳ್ಳರು ತಮ್ಮ ಕರಾಮತ್ತನ್ನು ತೋರಿಸಿ ಕೇಬಲ್ ವೈರ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.

ಇನ್ನೂ ಒಟ್ಟು 300 ಮೀಟರ್ ನಷ್ಟು ಕೇಬಲ್ ವೈರ್ ಕಳುವಾಗಿದ್ದು ಇದರಿಂದ ಸರಿಸುಮಾರು 1 ಲಕ್ಷದವರೆಗೂ ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಘಟನೆಗೆ ಸಂಭಂಧಿಸಿದಂತೆ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: chikkaballapurnews