Monday, 12th May 2025

ಸುವೇಂದು ಅಧಿಕಾರಿಯ ತಂದೆ, ಸಹೋದರನಿಗೆ ’ವೈ’ ಪ್ಲಸ್ ಭದ್ರತೆ

ಕೋಲ್ಕತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ 77 ಬಿಜೆಪಿ ಶಾಸಕರಿಗೆ ಕೇಂದ್ರ ಸರ್ಕಾರ ಭದ್ರತೆ ನೀಡಿದ ಕೆಲವು ದಿನಗಳ ನಂತರ, ಕೇಂದ್ರ ಗೃಹ ಸಚಿವಾಲಯ ಸುವೇಂದು ಅಧಿಕಾರಿ ತಂದೆ, ಸಂಸದ ಸಿಸಿರ್ ಕುಮಾರ್ ಅಧಿಕಾರಿ ಹಾಗೂ ಸಹೋದರ ದಿಬ್ಯೇಂದು ಅಧಿಕಾರಿಗೆ ವೈ ಪ್ಲಸ್ ಭದ್ರತೆ ನೀಡಿರುವುದಾಗಿ ವರದಿಯಾಗಿದೆ.

ಕೇಂದ್ರ ಸರ್ಕಾರದ ಈ ಕ್ರಮ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷವನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಸಾಧ್ಯತೆ ಇದೆ.

ಮಮತಾ ಸಂಪುಟದಲ್ಲಿ ಸಚಿವರಾಗಿ, ಆಪ್ತರಾಗಿದ್ದ ಸುವೇಂದು ಅಧಿಕಾರಿ ಬಂಡಾಯ ಎದ್ದು ಟಿಎಂಸಿ ತೊರೆದು ಬಿಜೆಪಿಯಿಂದ ನಂದಿಗ್ರಾಮದಲ್ಲಿ ಸ್ಪರ್ಧಿಸಿ ಮಮತಾ ಬ್ಯಾನರ್ಜಿ ಅವರನ್ನೇ 1,200 ಮತಗಳಿಂದ ಪರಾಜಯಗೊಳಿಸಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿತ್ತು. ಸುವೇಂದು ಅಧಿಕಾರಿಗೆ ಸಿಆರ್ ಪಿಎಫ್ ನ ವೈ ಪ್ಲಸ್ ಕೆಟಗರಿಯ ಭದ್ರತೆ ನೀಡಲಾಗಿದೆ.

Leave a Reply

Your email address will not be published. Required fields are marked *