Tuesday, 13th May 2025

ಗಣರಾಜ್ಯೋತ್ಸವ ದಿನದಂದು ಮೋದಿ, ಇತರ ಗಣ್ಯರಿಗೆ ಬೆದರಿಕೆ: ಗುಪ್ತಚರ ಇಲಾಖೆ

ನವದೆಹಲಿ: ಗಣರಾಜ್ಯೋತ್ಸವ ದಿನದಂದು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಇತರ ಗಣ್ಯರ ಜೀವಕ್ಕೆ ಬೆದರಿಕೆ ಒಡ್ಡಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಗುಪ್ತಚರ ಒಂಬತ್ತು ಪುಟಗಳ ಮಾಹಿತಿ ನೀಡಿದ್ದು, ಭಾರತದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಾಜರಿರುವ ಪ್ರಧಾನಿ ಮೋದಿ ಮತ್ತು ಇತರ ಗಣ್ಯರಿಗೆ ಬೆದರಿಕೆ ಇದೆ ಎಂದು ಸೂಚಿಸಿದೆ.

ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಎಂಬ ಐದು ಮಧ್ಯ ಏಷ್ಯಾದ ರಾಷ್ಟ್ರಗಳ ನಾಯಕರನ್ನ ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಸಾಧ್ಯತೆಯಿದೆ. ಪಾಕಿಸ್ತಾನ/ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದಿಂದ ಹೊರಗಿರುವ ಗುಂಪುಗಳಿಂದ ಬೆದರಿಕೆ ಈ ಬಂದಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ಭಯೋತ್ಪಾದಕ ಬೆದರಿಕೆಯ ಹಿಂದೆ ಲಷ್ಕರ್-ಎ-ತೊಯ್ಬಾ, ಪ್ರತಿರೋಧ ಪಡೆ, ಜೈಶ್-ಎ-ಮೊಹಮ್ಮದ್, ಹರ್ಕತ್-ಉಲ್-ಮುಜಾಹಿದ್ದೀನ್ ಮತ್ತು ಹಿಜ್ಬ್-ಉಲ್-ಮುಜಾಹಿದ್ದೀನ್ ನಂತಹ ಭಯೋತ್ಪಾದಕ ಗುಂಪುಗಳ ಕೈವಾಡವಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಖಲಿಸ್ತಾನಿ ಗುಂಪುಗಳು ಪಂಜಾಬ್ʼನಲ್ಲಿ ಉಗ್ರವಾದವನ್ನು ಮರುಸಂಘಟಿಸಲು ಮತ್ತು ಪುನರುಜ್ಜೀವನಗೊಳಿಸಲು ಕಾರ್ಯ ಕರ್ತರನ್ನ ಸಜ್ಜುಗೊಳಿಸುತ್ತಿವೆ ಎಂದು ಇನ್ ಪುಟ್ ಹೇಳಿದೆ.

ಫೆಬ್ರವರಿ 2021ರಲ್ಲಿ ಸ್ವೀಕರಿಸಿದ ಇನ್ ಪುಟ್ ಪ್ರಕಾರ, ಖಲಿಸ್ತಾನಿ ಭಯೋತ್ಪಾದಕ ಗುಂಪುಗಳು ಪ್ರಧಾನಿ ಸಭೆ ಮತ್ತು ಪ್ರವಾಸ ಸ್ಥಳಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿವೆ.