Tuesday, 13th May 2025

ಪತ್ರಕರ್ತ ತರುಣ್ ತೇಜ್‌ಪಾಲ್ ವಿಚಾರಣೆ ಅಕ್ಟೋಬರ್ 27ಕ್ಕೆ

ಪಣಜಿ: ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಳಿಸಿದ ಆದೇಶದ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಅಕ್ಟೋಬರ್ 27 ರಂದು ಕೈಗೆತ್ತಿಕೊಳ್ಳುವು ದಾಗಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹೇಳಿದೆ.

ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ದೇವಿದಾಸ್ ಪಂಗಂ ಮತ್ತು ತೇಜ್‌ಪಾಲ್ ಪರ ವಕೀಲರು ಮುಂದಿನ ವಿಚಾರಣೆಯ ದಿನಾಂಕವನ್ನು ತಿಳಿಸುವಂತೆ ನ್ಯಾಯಮೂರ್ತಿಗಳಾದ ಎಂ ಎಸ್ ಸೋನಾಕ್ ಮತ್ತು ಎಂ ಎಸ್ ಜಾವಲ್ಕರ್ ಅವರ ಪೀಠವನ್ನು ಕೇಳಿದರು.

ಪ್ರಕರಣದ ಮಂದಿನ ವಿಚಾರಣೆಯನ್ನು ವರ್ಚುವಲ್‌ ಮೂಲಕ ನಡೆಸಲು ನ್ಯಾಯಾಲಯ ಸೌಲಭ್ಯ ಕಲ್ಪಿಸಲಿದೆ. ಅಂದಿನ ನ್ಯಾಯಾಲಯದ ಕಲಾಪದಲ್ಲಿ ಗೋವಾ ಸರ್ಕಾರದ ಪರವಾಗಿ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದೆಹಲಿಯಿಂದ ಪಾಲ್ಗೊಳ್ಳಲಿದ್ದಾರೆ ಎಂದು ನ್ಯಾಮೂರ್ತಿ ಸೊನಾಕ್‌ ಹೇಳಿದರು.

ಅತ್ಯಾಚಾರ ಪ್ರಕರಣದಲ್ಲಿ ತೇಜ್‌ಪಾಲ್ ’ರನ್ನು ಖುಲಾಸೆಗೊಳಿಸುವುದರ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ವನವಿಯ ವಿಚಾರಣೆಯನ್ನು ಹೈಕೋರ್ಟ್ ಸೆ.20 ಕ್ಕೆ ಮುಂದೂಡಿತ್ತು.

Leave a Reply

Your email address will not be published. Required fields are marked *