Sunday, 11th May 2025

ಬಿಜೆಪಿ ಮಾಜಿ ಶಾಸಕಿ ಕಾರಿನ ಮೇಲೆ ಕಲ್ಲು ತೂರಾಟ

ಜೈಪುರ: ಬಿಜೆಪಿಯ ಮಾಜಿ ಶಾಸಕಿ ಅಮೃತಾ ಮೇಘವಾಲ್ ಅವರು ಸಂಚರಿಸು ತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆ ಯಲ್ಲಿ ಮೇಘವಾಲ್ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.

ಜೈಪುರದ ಬಯೋಲಾಜಿಕಲ್ ಪಾರ್ಕ್‌ ಪ್ರದೇಶದಿಂದ ಕುಟುಂಬದವರ ಜತೆ ಸಂಚರಿಸುತ್ತಿದ್ದಾಗ ಹಿಂಬಾಲಿಸಿದ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ಮೇಘವಾಲ್ ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿ ಗಯಾಸುದ್ದೀನ್ ಖಾನ್ ತಿಳಿಸಿದ್ದಾರೆ.

ಕಾರಿನ ಕಿಟಕಿ ಗಾಜು ಪುಡಿಯಾಗಿದ್ದು, ಮೇಘವಾಲ್ ಅವರ ಕಿವಿಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ. ಮೇಘವಾಲ್ ಮತ್ತು ಆರೋಪಿಗಳ ಮಧ್ಯೆ ಬಯೋಲಾಜಿಕಲ್ ಪಾರ್ಕ್‌ ಪ್ರದೇಶದಲ್ಲಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಅವರು ಕಾರನ್ನು ಹಿಂಬಾಲಿಸಿ ಕಲ್ಲೆಸೆದಿದ್ದಾರೆ ಎಂದೂ ತಿಳಿಸಿದ್ದಾರೆ. ಘಟನೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

Leave a Reply

Your email address will not be published. Required fields are marked *