Wednesday, 14th May 2025

ಶಿವಸೇನೆ ಶಾಸಕ ಹೃದಯಾಘಾತದಿಂದ ನಿಧನ

ಮುಂಬೈ: ದುಬೈನಲ್ಲಿ ಶಿವಸೇನೆ ಶಾಸಕ ರಮೇಶ್ ಲಟ್ಕೆ(52) ಅವರು ಹೃದಯಾಘಾತ ದಿಂದ ನಿಧನರಾಗಿದ್ದಾರೆ.

ಸ್ನೇಹಿತನನ್ನು ಅವರು ಭೇಟಿಯಾಗಲು ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಮೇಶ್ ಲಟ್ಕೆ ಅವರಿಗೆ ವಯಸ್ಸಾಗಿತ್ತು.

ಲಟ್ಕೆ ತಮ್ಮ ಕುಟುಂಬದವರೊಂದಿಗೆ ಶಾಪಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಮೃತಪಟ್ಟಿ ದ್ದಾರೆ. ಈಗ ನಾವು ಅವರ ಮೃತದೇಹ ವನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

2014 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಶೆಟ್ಟಿ ಅವರನ್ನು ಸೋಲಿಸಿ ರಮೇಶ್, ಮೊದಲ ಬಾರಿಗೆ ಅಂಧೇರಿ ಪೂರ್ವದಿಂದ ಶಾಸಕ ರಾದರು.

ಇದರ ನಂತರ, 2019 ರಲ್ಲಿ, ರಮೇಶ್ ಲಟ್ಕೆ ಅವರು ಸ್ವತಂತ್ರ ಅಭ್ಯರ್ಥಿ ಎಂ ಪಟೇಲ್ ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಗೆದ್ದರು. ರಮೇಶ್ ಲಟ್ಟೆ ಅವರು ಬಿಎಂಸಿಯಲ್ಲಿ ಹಲವಾರು ಬಾರಿ ಕೌನ್ಸಿಲರ್ ಆಗಿದ್ದರು.