Wednesday, 14th May 2025

ಶಾಲೆ ತೆರೆಯುವ ವಿಚಾರದಲ್ಲಿ ನಮ್ಮ ಮಧ್ಯಸ್ಥಿಕೆ ಇಲ್ಲ: ಸುಪ್ರೀಂ ಪೀಠ

ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನಿಂದಾಗಿ ದೇಶದಾದ್ಯಂತ ಮುಚ್ಚಲ್ಪಟ್ಟ ಶಾಲೆಗಳನ್ನು ಮತ್ತೆ ತೆರೆಯಲು ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಈ ಸಮಸ್ಯೆಗಳು ಗಂಭೀರ ಸಂಕೀರ್ಣತೆಯಿಂದ ಕೂಡಿದೆ. ನ್ಯಾಯಾಂಗದ ಆದೇಶದ ಮೂಲಕ ಮಧ್ಯ ಪ್ರವೇ ಶಿಸಬೇಕು ಎಂದು ನಾವು ಭಾವಿಸುವುದಿಲ್ಲ ಎಂದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ಅವರ ನ್ಯಾಯಪೀಠ ಹೇಳಿತು.

ಅಧ್ಯಯನಕ್ಕಾಗಿ ಸಮಯ ಕಳೆಯಲು ತನ್ನ ಕಕ್ಷಿದಾರರಿಗೆ ಸಲಹೆ ನೀಡುವಂತೆ ನ್ಯಾಯಪೀಠವನ್ನು ಕೇಳಿತು. ನ್ಯಾಯಮೂರ್ತಿ ಚಂದ್ರಚೂಡ್ ‘ ಮಕ್ಕಳು ಶಾಲೆಗೆ ಹಿಂತಿರುಗುವ ಅಗತ್ಯದ ಬಗ್ಗೆ ಉತ್ತರಿಸುವ ಮತ್ತು ಜಾಗೃತ ರಾಗಿದ್ದಾರೆ. ಲಸಿಕೆ ಹಾಕಲಾಗುತ್ತಿದೆ ‘ ಎಂದರು.

ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ತೆರೆದಿರುವುದನ್ನು ಸೂಚಿಸಿದ ಮೆಹ್ರೋತ್ರಾ, ಶಾಲೆಗಳು ಮುಚ್ಚಿರುವು ದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಪ್ರಭಾವಿತರಾಗುತ್ತಿದ್ದಾರೆ ಎಂದು ಹೇಳಿದರು. ಇದು ಮಧ್ಯಾಹ್ನದ ಊಟದಿಂದ ಮಕ್ಕಳನ್ನು ವಂಚಿಸುತ್ತಿದೆ ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *