Wednesday, 14th May 2025

ಕೃಷಿ ಕಾನೂನು ತಿದ್ದುಪಡಿ: ಸಮಿತಿಯ ಮೊದಲ ಸಭೆ ನಾಳೆಗೆ ಮುಂದೂಡಿಕೆ

ನವದೆಹಲಿ: ಕೃಷಿ ಕಾನೂನು ತಿದ್ದುಪಡಿ ಕುರಿತು ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿಯ ಮೊದಲ ಸಭೆ ಮಂಗಳವಾರ ದೆಹಲಿಯಲ್ಲಿ ನಡೆದರೂ, ಬುಧವಾರಕ್ಕೆ ಮುಂದೂಡಬೇಕಾಯಿತು.

ಮಂಗಳವಾರ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರದ ನಡುವೆ ಸಂವಾದ ನಡೆಯಬೇಕಿತ್ತಾದರೂ, ಅದನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 55 ನೇ ದಿನ ಪ್ರವೇಶಿಸಿತು.

ಮೂರು ಸದಸ್ಯರ ಸಮಿತಿಯಲ್ಲಿ ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ, ಕೃಷಿ ವಿಜ್ಞಾನಿ ಡಾ.ಪ್ರಮೋದ್ ಕುಮಾರ್ ಜೋಶಿ ಮತ್ತು ಶೆಟ್ಕರಿ ಸಂಗಾಥನ ಅಧ್ಯಕ್ಷ ಅನಿಲ್ ಘನ್ವಾತ್ ಇದ್ದಾರೆ.

ಪ್ರತಿಭಟನಾ ನಿರತ ರೈತರ ಮಧ್ಯಸ್ಥಿಕೆ ವಹಿಸಲು ನಾಲ್ಕು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿತ್ತು. ರೈತರ ಆಂದೋಲನವನ್ನು ನಿಭಾಯಿಸುವ ಬಗ್ಗೆ ಕೋರ್ಟ್ ಜ 11 ರಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮೂರು ಕೃಷಿ ಕಾನೂನುಗಳನ್ನು ಸ್ಥಗಿತಗೊಳಿಸಬಹುದೇ ಅಥವಾ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು.

 

Leave a Reply

Your email address will not be published. Required fields are marked *