Tuesday, 13th May 2025

ಸೆ.30ರಂದು ಭಾರತ ಮಂಟಪದಲ್ಲಿ ‘ಸಂಕಲ್ಪ ಸಪ್ತಾಹ್ ‘

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಂಟಪದಲ್ಲಿ ‘ಸಂಕಲ್ಪ ಸಪ್ತಾಹ್ ‘ ಎಂಬ ದೇಶದ ಬ್ಲಾಕ್‌ಗಳಿಗಾಗಿ ಒಂದು ವಾರದ ವಿಶಿಷ್ಟ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

‘ಸಂಕಲ್ಪ್ ಸಪ್ತಾಹ್’ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿ ಸಿದೆ. ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿಯವರು ಜನವರಿ 7, 2023 ರಂದು ಪ್ರಾರಂಭಿ ಸಿದರು.

ನಾಗರಿಕರ ಜೀವನದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಬ್ಲಾಕ್ ಮಟ್ಟದಲ್ಲಿ ಆಡಳಿತವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ದೇಶದ 329 ಜಿಲ್ಲೆಗಳಲ್ಲಿ 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮತ್ತು ಪರಿಣಾಮಕಾರಿ ಬ್ಲಾಕ್ ಅಭಿವೃದ್ಧಿ ಕಾರ್ಯತಂತ್ರವನ್ನು ತಯಾರಿಸಲು, ದೇಶಾದ್ಯಂತ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಚಿಂತನ ಶಿಬಿರಗಳನ್ನು ಆಯೋಜಿಸಲಾಗಿದೆ.

‘ಸಂಕಲ್ಪ ಸಪ್ತಾಹ’ ಈ ಚಿಂತನ ಶಿಬಿರಗಳ ಪರಾಕಾಷ್ಠೆಯಾಗಿದೆ. 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ‘ಸಂಕಲ್ಪ್ ಸಪ್ತಾಹ್’ ಅನ್ನು ಆಚರಿಸಲಾಗುತ್ತದೆ.
ಅಕ್ಟೋಬರ್ 3 ರಿಂದ ಅಕ್ಟೋಬರ್ 9, 2023 ರವರೆಗೆ ‘ಸಂಕಲ್ಪ್ ಸಪ್ತಾಹ್’ ನಲ್ಲಿ ಪ್ರತಿ ದಿನವು ಒಂದು ನಿರ್ದಿಷ್ಟ ಅಭಿವೃದ್ಧಿ ಥೀಮ್‌ಗೆ ಮೀಸಲಾಗಿರುತ್ತದೆ. ಅದರ ಮೇಲೆ ಎಲ್ಲಾ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಕಾರ್ಯನಿರ್ವಹಿಸುತ್ತವೆ. ಮೊದಲ ಆರು ದಿನಗಳ ವಿಷಯಗಳಲ್ಲಿ ‘ಸಂಪೂರ್ಣ ಸ್ವಾಸ್ಥ್ಯ’, ‘ಸುಪೋಷಿತ್ ಪರಿವಾರ’, ‘ಸ್ವಚ್ಛತಾ’, ‘ಕೃಷಿ’, ‘ಶಿಕ್ಷಾ’ ಮತ್ತು ‘ಸಮೃದ್ಧಿ ದಿವಸ್’ ಸೇರಿವೆ ಎಂದು ಹೇಳಿಕೆ ತಿಳಿಸಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ಮಂಟಪದಲ್ಲಿ ಸುಮಾರು 3,000 ಪಂಚಾಯತ್ ಮತ್ತು ಬ್ಲಾಕ್ ಮಟ್ಟದ ಜನಪ್ರತಿನಿಧಿಗಳು ಮತ್ತು ಕಾರ್ಯ ಕರ್ತರು ದೇಶಾದ್ಯಂತ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *