Sunday, 11th May 2025

ಅಗ್ನಿ ಅವಘಡ: ಮೂರು ಮಂದಿ ಸಜೀವ ದಹನ, 20 ಮನೆ ಭಸ್ಮ

ಸಮಸ್ಟಿಪುರ: ಜಿಲ್ಲೆಯ ಚಕ್ಕನ್ ಟೋಲಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಮೃತಪಟ್ಟು, 20 ಮನೆಗಳು ಹಾಗೂ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಶುಕ್ರವಾರ ರಾತ್ರಿ ಗ್ರಾಮಸ್ಥರೆಲ್ಲರೂ ಮಲಗಿದ್ದ ವೇಳೆ ಘಟನೆ ಸಂಭವಿಸಿದೆ. ಜ್ವಾಲೆ ಕಾಣಿಸು ತ್ತಿದ್ದಂತೆಯೇ ಎಲ್ಲರೂ ಮನೆಯಿಂದ ಹೊರ ಓಡಿ ಬಂದಿದ್ದಾರೆ. ಗಾಢ ನಿದ್ರೆಯಲ್ಲಿದ್ದವರು ಮಾತ್ರ ಸಜೀವವಾಗಿ ದಹನಗೊಂಡಿದ್ದಾರೆ.

ಕಿಸುನ್ ದೇವಿ (65), ಸಂಗೀತಾ ದೇವಿ (28) ಹಾಗೂ ಗಂಗಾ ಕುಮಾರಿ (8) ಮೃತರು. ಸ್ಥಳಕ್ಕೆ ದೌಡಾಯಿಸಿದ ಕಲ್ಯಾಣ್​ಪುರ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Leave a Reply

Your email address will not be published. Required fields are marked *