Tuesday, 13th May 2025

ತೌಕ್ತೆ ಚಂಡಮಾರುತ: 1000 ಕೋಟಿ ರೂ. ಪರಿಹಾರ ಘೋಷಣೆ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ತೌಕ್ತೆ ಚಂಡಮಾರುತ ದಿಂದ ಹಾನಿಗೀಡಾದ ಗುಜರಾತ್ ಗೆ 1000 ಕೋಟಿ ರೂ. ಪರಿಹಾರ ಮೊತ್ತವನ್ನು ಘೋಷಿಸಿದ್ದಾರೆ.

ಬುಧವಾರ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ, ತವರು ರಾಜ್ಯ ಗುಜರಾತ್ ಗೆ 1000 ಕೋಟಿ ರೂ. ಘೋಷಿಸಿದ್ದಾರೆ.

ಗುಜರಾತ್ ನ ಗಿರ್ ಸೋಮನಾಥ್, ಭವಂಗರ್ ಮತ್ತು ಡಿಯು ಪ್ರದೇಶಗಳಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು. ಇದೇ ವೇಳೆ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಧನ ಪ್ರಕಟಿಸಿದರು.

Leave a Reply

Your email address will not be published. Required fields are marked *