Tuesday, 13th May 2025

ಉಪಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರಲ್ಲಿ ನವಜೋತ್ ಸಿಂಗ್ ಸಿಧು

ನವದೆಹಲಿ: ಅ.30 ರಂದು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ಉಪಚುನಾವಣೆಗೆ ನವಜೋತ್ ಸಿಂಗ್ ಸಿಧು ಅವರನ್ನು ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕ ರಲ್ಲಿ ಹೆಸರಿಸಿದೆ. ಪಂಜಾಬ್’ನ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ 20 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಮಂಡಿ ಲೋಕಸಭೆ ಮತ್ತು ಅರ್ಕಿ, ಫತೇಪುರ್ ಮತ್ತು ಉಪ ಚುನಾವಣೆಗಳಿಗಾಗಿ ಹೊಸದಾಗಿ ಸೇರ್ಪಡೆಯಾದ ಕನ್ಹಯ್ಯ ಕುಮಾರ್ ಕೂಡ ಸೇರಿದ್ದಾರೆ. ಸಿಧು ಕಳೆದ ತಿಂಗಳು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರು ತಮ್ಮ ರಾಜ್ಯದ ಭವಿಷ್ಯ ಮತ್ತು ಕಲ್ಯಾಣದ ಬಗ್ಗೆ ರಾಜಿ ಮಾಡಿ ಕೊಳ್ಳುವಂತಿಲ್ಲ ಎಂದು ಹೇಳಿದ್ದರು.

ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚಾನಿ, ನಟ-ರಾಜಕಾರಣಿ ರಾಜ್ ಬಬ್ಬರ್, ಶಿಮ್ಲಾ (ಗ್ರಾಮೀಣ) ಶಾಸಕ ವಿಕ್ರಮಾದಿತ್ಯ ಸಿಂಗ್, ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಮತ್ತು ಪಂಜಾಬ್ ಸಚಿವ ಗುರ್ಕೀರತ್ ಸಿಂಗ್ ಕೊಟ್ಲಿ ಅವರನ್ನೂ ಉಪಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸ ಲಾಗಿದೆ.

ಛತ್ತೀಸಗಢ ಸಿಎಂ ಭೂಪೇಶ್ ಬಘೇಲ್, ಹಿರಿಯ ಕಾಂಗ್ರೆಸ್ ನಾಯಕರಾದ ಆನಂದ್ ಶರ್ಮಾ, ರಾಜೀವ್ ಶುಕ್ಲಾ, ಆಶಾ ಕುಮಾರಿ, ಧನಿರಾಮ್ ಶಾಂಡಿಲ್, ಸಚಿನ್ ಪೈಲಟ್, ಸಂಜಯ್ ದತ್, ಠಾಕೂರ್ ಕೌಲ್ ಸಿಂಗ್, ಸುಖ್ವಿಂದರ್ ಸಿಂಗ್ ಸುಖು ಅವರನ್ನೂ ಸ್ಟಾರ್ ಪ್ರಚಾರಕರಲ್ಲಿ ಹೆಸರಿಸಲಾಗಿದೆ.

ಕುಲದೀಪ್ ಸಿಂಗ್ ರಾಥೋಡ್, ಮುಖೇಶ್ ಅಗ್ನಿಹೋತ್ರಿ, ರಾಜೇಂದರ್ ರಾಣಾ, ಧರಮವೀರ್ ಸಿಂಗ್ ರಾಣಾ ಮತ್ತು ಕನ್ಹಯ್ಯ ಕುಮಾರ್ ಈ ಪಟ್ಟಿಯಲ್ಲಿರುವ ಇತರರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತನ್ನ ಸ್ಟಾರ್ ಪ್ರಚಾರಕರ ಪ್ರತಿಯನ್ನು ಹಿಮಾಚಲ ಪ್ರದೇಶದ ಮುಖ್ಯ ಚುನಾವಣಾಧಿಕಾರಿಗೆ ಕಳುಹಿಸಿದ್ದಾರೆ.

ಅಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜೊತೆಗಿನ ವೈಮನಸ್ಸಿನ ನಂತರ ಸಿದ್ದು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಪಂಜಾಬ್ ಕಾಂಗ್ರೆಸ್ ನಲ್ಲಿನ ಒಳಜಗಳದಿಂದಾಗಿ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Leave a Reply

Your email address will not be published. Required fields are marked *