ಮುಂಬೈ: ಮಹಾರಾಷ್ಟ್ರದ ಸಚಿವ ಗುಲಾಬರಾವ್ ಪಾಟೀಲ್ (Gulabrao Patil) ಅವರ ಕಾರಿನ ಚಾಲಕ ಹಾಗೂ ಕಸಾಯಿವಾಡ ಗ್ರಾಮದ ಸ್ಥಳೀಯ ಗುಂಪಿನ ನಡುವೆ ಮಂಗಳವಾರ ಕ್ಷುಲಕ್ಕ ಕಾರಣಕ್ಕೆ ನಡೆದ ವಾದ ವಿವಾದ ಹಿಂಸಾಚಾರಕ್ಕೆ ತಿರುಗಿತು. ಪಾಲ್ತಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಬೆಳಗ್ಗೆ ತಿಳಿಸಿದ್ದಾರೆ (Maharashtra Curfew).
जलगांव में बवाल के साथ नए साल की शुरुआत, मंत्री की गाड़ी को लेकर विवाद के बाद दो गुटों में हुई भिड़ंत,लगा कर्फ्यू,महायुति सरकार में मंत्री गुलाबराव पाटिल की कार उनकी पत्नी और परिवार के सदस्यों को लेकर जा रही थी।गांव के एक युवक को कार से धक्का लग गया और देखते-देखते भीड़ जमा हो गई। pic.twitter.com/74jVmYfvqh
— SYED SHOEB (@SyedSho43211335) January 1, 2025
ಪಾಲ್ತಿ ಗ್ರಾಮದ ಕಸಾಯಿವಾಡ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಮೂಲ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯಾದರೂ ಬುಧವಾರ ಬೆಳಗಿನ ಜಾವದವರೆಗೂ ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#WATCH | Security heightened in Maharashtra's Jalgaon after a violent clash broke out between two groups here last night.
— ANI (@ANI) January 1, 2025
Curfew has been imposed in violence-hit Paladhi village in Maharashtra’s Jalgaon district pic.twitter.com/rJxwDZhcwO
ಈ ಬಗ್ಗೆ ಮಾತನಾಡಿದ ಉಪ ಅಧೀಕ್ಷಕಿ ಕವಿತಾ ನೇರ್ಕರ್ ಪೊಲೀಸರು ಧರಂಗಾವ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಗಲಭೆ ಎಸಗಿದ ಅಪರಾಧವನ್ನು ದಾಖಲಿಸಿದ್ದಾರೆ ಮತ್ತು 20-25 ಜನರನ್ನು ಬಂಧಿಸಿದ್ದಾರೆ. ಮೇಲಾಗಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
#WATCH | Maharashtra | On violent clash between two groups in Paladhi village of Jalgaon, Additional SP Kavita Nerkar says, "Yesterday night, a clash broke out between two groups. Some vehicles and shops were set on fire… An FIR has been registered against 20-25 people and 7… pic.twitter.com/vp5Svplk24
— ANI (@ANI) January 1, 2025
ಮಂಗಳವಾರ ತಡರಾತ್ರಿ ಗ್ರಾಮದ ಕಸಾಯಿವಾಡ ಪ್ರದೇಶದಲ್ಲಿ ಸಚಿವ ಗುಲಾಬರಾವ್ ಪಾಟೀಲ್ ಅವರ ಕಾರಿನ ಚಾಲಕ ಹಾಗೂ ಚಾಲಕ ಹಾರ್ನ್ ಮಾಡಿ ದಾರಿ ಮಾಡಿಕೊಡುವಂತೆ ಕೇಳಿದಾಗ ಸ್ಥಳೀಯರ ಗುಂಪು ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಶಿವಸೇನೆ ಮುಖಂಡ ಹಾಗೂ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಸಚಿವ ಪಾಟೀಲ್ ಅವರು ಹಾಜರಿರಲಿಲ್ಲ. ಆದರೆ ಅವರ ಕುಟುಂಬದ ಸದಸ್ಯರು ಕಾರಿನಲ್ಲಿ ಇದ್ದರು ಎಂದು ಹೇಳಲಾಗಿದೆ.
ಈ ಸುದ್ದಿಯನ್ನೂ ಓದಿ : Rashmi Shukla: ಮಹಾರಾಷ್ಟ್ರ ಡಿಜಿಪಿಯಾಗಿ ರಶ್ಮಿ ಶುಕ್ಲಾ ಮರು ನೇಮಕ