Sunday, 11th May 2025

ಅಪಘಾತಕ್ಕೀಡಾದ ಬಸ್ಸುಗಳಿಗೆ ಲಾರಿ ಡಿಕ್ಕಿ

ವಿಜಯನಗರಂ: ಆಂಧ್ರಪ್ರದೇಶದ ವಿಜಯನಗರಂ-ವಿಶಾಖಪಟ್ಟಣಂ ಹೆದ್ದಾರಿ ಯಲ್ಲಿ ಸೋಮವಾರ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ ಟಿಸಿ)ದ ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂರು ಮಂದಿ ಮೃತ ಪಟ್ಟಿದ್ದು, ಐದು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸುಂಕರಿಪೇಟೆ ಗ್ರಾಮದ ಬಳಿ ಎರಡೂ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತ ಸಂಭವಿಸಿದಾಗ ಎರಡೂ ಬಸ್‌ಗಳಲ್ಲಿ ಸುಮಾರು 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಎರಡೂ ಬಸ್‌ಗಳ ಚಾಲಕರು ಮತ್ತು ಓರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ. ಗಾಯಗೊಂಡ ಐವರು ಪ್ರಯಾಣಿಕ ರನ್ನು ವಿಜಯನಗರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಪಘಾತದಲ್ಲಿ ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತ ಲಾರಿಯೊಂದು ಸಹ ಒಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *