Monday, 12th May 2025

ಲಖಿಂಪುರ್ ಖೇರಿ ಹಿಂಸಾಚಾರ: ವಿಚಾರಣೆಗೆ ಹಾಜರಾದ ಆಶಿಶ್ ಮಿಶ್ರಾ

ನವದೆಹಲಿ : ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಆರೋಪಿ ಆಶಿಶ್ ಮಿಶ್ರಾ ಅಪರಾಧ ವಿಭಾಗದ ಕಚೇರಿಯಲ್ಲಿ ಪೊಲೀಸರ ಮುಂದೆ ಹಾಜ ರಾದರು.

ಲಖಿಂಪುರ್ ಖೇರಿನಲ್ಲಿ ರೈತರ ಸಾವಿಗೆ ಸಂಬಂಧಿಸಿ, ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ಆಶಿಶ್ ಮಿಶ್ರಾಗೆ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಶಿಶ್ ಮಿಶ್ರಾ ವಿಚಾರಣೆಗೆ ಹಾಜರಾಗಿದ್ದಾನೆ.

ಕಳೆದ ಭಾನುವಾರ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ವಾಹನ ಪ್ರತಿಭಟನಾ ನಿರತರ ಮೇಲೆ ಹರಿದ ಘಟನೆ ಯಲ್ಲಿ ನಾಲ್ಕು ಮಂದಿ ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಕೇಂದ್ರ ಸಚಿವರ ಕಾರು ಚಾಲಕ ಹಾಗೂ ಪತ್ರಕರ್ತ ಮೃತಪಟ್ಟಿದ್ದರು.

,

Leave a Reply

Your email address will not be published. Required fields are marked *