Sunday, 11th May 2025

ಬಿಕಾನೇರ್‌: ಅಕ್ಕಿಯ ಕಂಟೈನರ್ ನಲ್ಲಿ ಸಿಲುಕಿ, ಉಸಿರುಗಟ್ಟಿ ಮಕ್ಕಳ ಸಾವು

ಬಿಕಾನೇರ್ : ರಾಜಸ್ಥಾನ ರಾಜ್ಯದ ಬಿಕಾನೇರ್ ನ ಹಿಮ್ಮಟಸಾರ್ ಗ್ರಾಮದಲ್ಲಿ ಆಟವಾಡುತ್ತಿದ್ದ ವೇಳೆ ಐದು ಮಂದಿ ಮಕ್ಕಳು ಧಾನ್ಯ ಸಂಗ್ರಹ ಮಾಡುತ್ತಿದ್ದ ಕಂಟೈನರ್ ನಲ್ಲಿ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ವರದಿ ಪ್ರಕಾರ, ಕಂಟೈನರ್ ಖಾಲಿಯಾಗಿದ್ದು, ಮಕ್ಕಳು ಆಟವಾಡುವಾಗ ಒಬ್ಬರ ಹಿಂದೆ ಒಂದರಂತೆ ಜಂಪ್ ಮಾಡಿದ್ದಾರೆ. ಕಂಟೈನರ್ ಆಕಸ್ಮಿಕವಾಗಿ ಮುಚ್ಚಿದ ಕಾರಣ ಮಕ್ಕಳು ಒಳಗಡೆ ಸಿಕ್ಕಿಹಾಕಿಕೊಂಡಿದ್ದರು ಎನ್ನಲಾಗಿದೆ.

ಸೇವರಾಮ್ (4), ರವೀನಾ (7), ರಾಧಾ (5), ಪೂನಂ (8) ಮತ್ತು ಮಾಲಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಎಸ್ ಪಿ ತಿಳಿಸಿದ್ದಾರೆ.

ಮಕ್ಕಳಿಗಾಗಿ ತಾಯಿ ಹುಡುಕಿದಾಗ ಕಾಣಲಿಲ್ಲ, ಕಂಟೈನರ್ ತೆರೆದು ನೋಡಿದಾಗ ಮಕ್ಕಳು ಸಿಲುಕಿರುವುದು ಕಂಡು ಬಂದಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *