Wednesday, 14th May 2025

ಹೆದ್ದಾರಿ ದುರಸ್ತಿಗೆ ಆಗ್ರಹ: ಕೆಸರಿನಲ್ಲಿ ಮಿಂದೆದ್ದ ಜಾರ್ಖಂಡ್‌ ಶಾಸಕಿ

ಜಾರ್ಖಂಡ್‌: ಹೆದ್ದಾರಿ ದುರಸ್ತಿಯನ್ನು ಶೀಘ್ರವೇ ಮಾಡುವಂತೆ ಒತ್ತಾಯಿಸಿ ಜಾರ್ಖಂಡ್‌ ನ ಶಾಸಕಿ ರಸ್ತೆಯ ಹೊಂಡದಲ್ಲಿರುವ ಕೆಸರಿನಲ್ಲಿ ಮಿಂದೇಳುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 133 ದುರಸ್ತಿಗೆ ಒತ್ತಾಯಿಸಿ ಜಾರ್ಖಂಡ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಬುಧವಾರ ಕೆಸರುಮಯ ರಸ್ತೆಯಲ್ಲಿ ಕುಳಿತು ರಸ್ತೆಯ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಪ್ರಾರಂಭವಾಗು ವವರೆಗೂ ಅವರು ರಸ್ತೆಯಿಂದ ಮೇಲೇಳುವುದಿಲ್ಲ ಎಂದು ಹೇಳಿದರು.

ಹಿಂದಿನಿಂದಲೂ ರಸ್ತೆ ಹದಗೆಟ್ಟಿದ್ದು, ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ.  ಈ ಹಿಂದೆ ಹಲವು ಬಾರಿ ರಸ್ತೆ ದುರಸ್ತಿ ಮಾಡಲಾಗಿತ್ತು ಆದರೆ ಪ್ರತಿ ದುರಸ್ತಿಯ ನಂತರ ಪರಿಸ್ಥಿತಿ ಹದಗೆಡುತ್ತಿದೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಒದಗಿಸ ಬೇಕೆಂದು ಅವರು ಆಗ್ರಹಿಸಿದ್ದಾರೆ.