Tuesday, 13th May 2025

ಅಮರನಾಥ ಗುಹೆ ಬಳಿಯ ಬೇಸ್ ಕ್ಯಾಂಪ್‌ನಲ್ಲಿ ಮೇಘ ಸ್ಫೋಟ

ಶ್ರೀನಗರ: ಉತ್ತರಖಾಂಡ, ಕಾಶ್ಮಿರ, ಹಿಮಾಚಲ ಪ್ರದೇಶಗಳಲ್ಲಿ ಮೇಘಸ್ಪೋಟವಾಗುತ್ತಿದ್ದು, ಪ್ರಾಣ ಹಾನಿ ಮತ್ತು ಬಹಳಷ್ಟು ಹಾನಿ ಉಂಟಾಗುತ್ತಿದೆ. ಇದೀಗ ಅಮರನಾಥ ಗುಹೆ ಬಳಿಯ ಬೇಸ್ ಕ್ಯಾಂಪ್‌ನಲ್ಲಿ ಮೇಘ ಸ್ಫೋಟಗೊಂಡಿದೆ.

ಅಮರನಾಥ ಗುಗೆ ಬಳಿ ಮೇಘ ಸ್ಪೋಟಗೊಂಡ ಹಿನ್ನೆಲೆ ಬೇಸ್‌ಕ್ಯಾಂಪ್‌ ಹಾನಿಯಾಗಿದ್ದು, ಸಾವು ನೋವುಗಳು ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಸ್‌ಡಿಆರ್‌ಎಫ್‌ನ ಎರಡು ಅಮರನಾಥ ಗುಹೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿವೆ ಎನ್ನಲಾಗಿದೆ.

ಕರೋನಾ ಹಿನ್ನೆಲೆಯಲ್ಲಿ ಈ ವರ್ಷ ಅಮರನಾಥ ಯಾತ್ರೆ ಮುಂದೂಡಲ್ಪಟ್ಟಿದೆಯಾದರೂ ಭದ್ರತಾ ಪಡೆ ಸಿಬ್ಬಂದಿ, ಆರೋಗ್ಯ ಇಲಾಖೆ, ಇತರ ಇಲಾಖೆಗಳ ನೌಕರರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *