Monday, 12th May 2025

ಜನರು ಬದುಕಲು ಯೋಗ್ಯವಾದ ವಾತಾವರಣ ಇಲ್ಲ: ಸಂಸದೆ ರೂಪಾ ಗಂಗೂಲಿ

#RoopaGanguly

ನವದೆಹಲಿ : ರಾಜ್ಯಸಭೆಯಲ್ಲಿ ಬಿರ್ಭೂಮ್ ಘಟನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಆಡಳಿತದ ವಿರುದ್ಧ ಶುಕ್ರವಾರ ಬಿಜೆಪಿ ಸಂಸದೆ ರೂಪಾ ಗಂಗೂಲಿ ವಾಗ್ದಾಳಿ ನಡೆಸಿ, ಕಣ್ಣೀರಿಟ್ಟಿ ದ್ದಾರೆ.

ಬಿರ್ ಭೂಮ್ ಹಿಂಸಾಚಾರದ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ ರೂಪಾ ಗಂಗೂಲಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದರು. ಬಂಗಾಳದಲ್ಲಿ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ. ಜನರು ಭಯದಿಂದ ರಾಜ್ಯದಿಂದ ಪಲಾಯನ ಮಾಡುತ್ತಿದ್ದಾರೆ. ಅಲ್ಲಿ ಜನರು ಬದುಕಲು ಯೋಗ್ಯವಾದ ವಾತಾವರಣ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.