Sunday, 11th May 2025

ಗ್ಯಾಂಗ್’ಸ್ಟರ್’ನಿಂದ ವಶಪಡಿಸಿಕೊಂಡ ಜಾಗದಲ್ಲಿ ಮನೆ ನಿರ್ಮಿಸಿ, ಬಡವರಿಗೆ ಹಂಚಿದ ಯೋಗಿ

ಲಖನೌ: ಕೆಲ ತಿಂಗಳ ಹಿಂದಷ್ಟೇ ಹತ್ಯೆಗೀಡಾದ ಆತಿಕ್‌ ಅಹ್ಮದ್‌ ನಿಂದ ವಶಪಡಿಸಿ ಕೊಂಡ ಜಾಗದಲ್ಲಿ ಉತ್ತರ ಪ್ರದೇಶ ಸರ್ಕಾರ ದಿಂದ ಬಡವರಿಗಾಗಿ ಮನೆಗಳನ್ನು ನಿರ್ಮಿಸ ಲಾಗಿದ್ದು, ಫಲಾನುಭವಿ ಗಳಿಗೆ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಫ್ಲ್ಯಾಟ್‌ ಗಳನ್ನು ಹಂಚಿಕೆ ಮಾಡಿದ್ದಾರೆ.

ಒಂದು ಫ್ಲ್ಯಾಟ್‌ನಲ್ಲಿ ಎರಡು ಕೋಣೆ, ಬೇಸಿಕ್‌ ಕಿಚನ್‌ ಸೆಟಪ್‌, ಒಂದು ಬಾತ್‌ರೂಮ್‌ ಇದೆ.

ಪ್ರಯಾಗರಾಜ್‌ನ ಲುಕುವಾರ್‌ಗಂಜ್‌ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ 76 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ಫಲಾನುಭವಿಗಳಿಗೆ ಹಂಚಿಕೆ ಮಾಡುವ ಮೊದಲು ಯೋಗಿ ಆದಿತ್ಯನಾಥ್‌ ಅವರು ಅಪಾರ್ಟ್‌ಮೆಂಟ್‌ ವೀಕ್ಷಣೆ ಮಾಡಿದರು. ಬಳಿಕ 76 ಜನರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ನೀಡಿದರು. ಬಡವರನ್ನು ಗುರುತಿಸಿ, ಅವರಿಂದ ಕೇವಲ 3.5 ಲಕ್ಷ ರೂ. ಪಡೆದು ಫ್ಲ್ಯಾಟ್‌ ನೀಡಲಾ ಗಿದೆ.

Leave a Reply

Your email address will not be published. Required fields are marked *