Thursday, 15th May 2025

ವಾಹನ ಕಂದಕಕ್ಕೆ ಬಿದ್ದು, ಆರು ಮಂದಿ ಸಾವು

ಕಿಶ್ತ್ವಾರ್​: ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ವಾಹನವೊಂದು ಕಂದಕಕ್ಕೆ ಬಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

ಕಿಶ್ತ್ವಾರ್​ ಜಿಲ್ಲೆಯಲ್ಲೂ ಸಹ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಕಂದಕಕ್ಕೆ ಬಿದ್ದು, ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿ ದ್ದರೆ, 6ನೇಯವರು ಆಸ್ಪತ್ರೆಗೆ ಸಾಗಿಸಿದ ನಂತರ ಸಾವನ್ನಪ್ಪಿದ್ದಾರೆ. ಮೃತರನ್ನು ಅಬ್ದುಲ್​ ಲತೀಫ್​, ಅಬ್ದುಲ್​ ರೆಹಮಾನ್​, ಅತಾ ಮುಹಮ್ಮದ್​ , ಇನಾಮ್​, ಮೊಹಮ್ಮದ್​ ಅಖ್ರಾಮ್​ ಮತ್ತು ಜಮೀರ್ (18) ಎಂದು ಗುರುತಿಸಲಾಗಿದೆ.

ಘಟನೆ ನಡೆಯುತ್ತಿದ್ದಂತೆ 26 ರಾಷ್ಟ್ರೀಯ ರೈಫಲ್ಸ್​ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತಕ್ಕೆ ನಿಜವಾದ ಕಾರಣ ತಿಳಿದುಬಂದಿಲ್ಲ.