Monday, 12th May 2025

ಉಪ್ಪು ಕಾರ್ಖಾನೆಯ ಗೋಡೆ ಕುಸಿತ: 12 ಕಾರ್ಮಿಕರ ಸಾವು

ಅಹ್ಮದಾಬಾದ್:‌ ಗುಜರಾತ್‌ ನ ಮೊರ್ಬಿ ಎಂಬಲ್ಲಿನ ಹಲ್ವಾಡ್ ಜಿಐಡಿಸಿಯಲ್ಲಿ ಉಪ್ಪು ಕಾರ್ಖಾನೆಯ ಗೋಡೆ ಕುಸಿದು ಕನಿಷ್ಠ 12 ಕಾರ್ಮಿಕರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಇನ್ನೂ ಮೂವರು ಮೃತಪಟ್ಟಿರುವ ಶಂಕೆ ಇದೆ. ಕಾರ್ಮಿಕರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪಿಎಂಎನ್‌ ಆರ್‌ಎಫ್‌ನಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಜೆಸಿಬಿ ಬಳಸಿ ಸ್ಥಳೀಯ ಆಡಳಿತವು ಮೃತದೇಹಗಳನ್ನು ಹೊರತೆಗೆದು ಅವಶೇಷಗಳಡಿ ಸಿಲುಕಿದವ ರನ್ನು ರಕ್ಷಿಸಿತು. ಗೋಣಿ ಚೀಲಗಳಲ್ಲಿ ಉಪ್ಪು ತುಂಬುವ ಪ್ರಕ್ರಿಯೆ ನಡೆಯುತ್ತಿದ್ದಾಗ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಏಕಾಏಕಿ ಗೋಡೆ ಕುಸಿದಿದ್ದು, 30 ಕಾರ್ಮಿಕರು ಸಮಾಧಿಯಾಗಿರುವ ಭೀತಿ ಎದುರಾಗಿದೆ. 12 ಸಾವು ದೃಢಪಟ್ಟಿದೆ.