Wednesday, 14th May 2025

ಆಲಿಯಾ ಜಾಹೀರಾತಿಗೆ ಕಿಡಿಕಾರಿದ ಕಂಗನಾ

ಬೆಂಗಳೂರು: ಬಾಲಿವುಡ್ ನಟಿ ಆಲಿಯಾ ಭಟ್ ಕಾಣಿಸಿಕೊಂಡಿರುವ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ.

‘ಕನ್ಯಾದಾನ’ದ ವಿಷಯವನ್ನು ಆಧಾರವಾಗಿಟ್ಟುಕೊಂಡು ಜಾಹೀರಾತನ್ನು ನಿರ್ಮಿಸಲಾಗಿದ್ದು, ವಧುವನ್ನು ದಾನ ಮಾಡಲು ವಸ್ತುವೇ? ಎಂಬ ಪ್ರಶ್ನೆಯನ್ನು ಜಾಹೀರಾತು ಎತ್ತುತ್ತದೆ.

ಜಾಹಿರಾತಿನ ಕುರಿತು ಕೂ ವೇದಿಕೆಯಲ್ಲಿ ಬರೆದುಕೊಂಡಿರುವ ಕಂಗನಾ, ‘ನಮ್ಮ ಮೌಲ್ಯಗಳನ್ನು ಅಣಕಿಸಬೇಡಿ’ ಎಂದು ಆಲಿಯಾ ಅವರನ್ನು ನೇರವಾಗಿಯೇ ಉಲ್ಲೇಖಿಸಿದ್ದಾರೆ. ಜೊತೆಗೆ ಕನ್ಯಾದಾನದ ಕುರಿತು ವಿವರಿಸಿದ್ದಾರೆ.

‘ಎಲ್ಲಾ ಬ್ರಾಂಡ್‌ಗಳಿಗೆ ವಿನಮ್ರ ವಿನಂತಿ … ನಿಮ್ಮ ವಸ್ತುಗಳನ್ನು ಮಾರಾಟ ಮಾಡಲು ಧರ್ಮವನ್ನು ಬಳಸುವು ದನ್ನು ನಿಲ್ಲಿಸಿ, ಅಲ್ಪಸಂಖ್ಯಾತರು ಮತ್ತು ಹಿಂದೂ ದ್ವೇಷಿಗಳನ್ನು ಮೆಚ್ಚಿಸಲು ಪ್ರಯತ್ನಿಸುವ ಹಿಂದೂಫೋಬಿಕ್ ಜಾಹೀರಾತುಗಳನ್ನು ನಿಲ್ಲಿಸಿ. ‘ಮೊದಲು ಹಿಂದೂ ಧರ್ಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ಡ್ಯಾನ್‌ನ ಪರಿಕಲ್ಪನೆಯನ್ನು ತಿಳಿದಿಲ್ಲದ ಮೂರ್ಖರು ನೀವು ಅದನ್ನು ಏನೆಂದು ಖಂಡಿಸುತ್ತೀರಾ?.

‘ಮೊದಲು ತ್ಯಾಗದ ತತ್ವಗಳನ್ನು ಹಾಗು ಮಹಿಳೆ ಮತ್ತು ಭೂಮಿಯನ್ನು ಅಸ್ತಿತ್ವದ ಮೂಲವೆಂದು ಏಕೆ ಪರಿಗಣಿಸ ಲಾಗಿದೆ ಎಂಬುದನ್ನು ತಿಳಿಯಿರಿ’ ಎಂದು ಕೂ ಮಾಡಿದ್ದಾರೆ.

Leave a Reply

Your email address will not be published. Required fields are marked *