Saturday, 10th May 2025

BBK 11: ಗೌತಮಿ vs ಮೋಕ್ಷಿತಾ: ಬಿಗ್ ಬಾಸ್ ಮನೆಯಲ್ಲಿ ನಿಲ್ಲದ ಸೇಡಿನ ಕಿಚ್ಚು

Gauthami and Mokshitha

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಈ ವಾರ ಕಳೆದ ಸೀಸನ್​ನ ಸ್ಪರ್ಧಿಗಳು ಮನೆಯೊಳಗೆ ಬರುತ್ತಿದ್ದು, ನಿನ್ನೆ ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತು ಹಾಗೂ ವರ್ತೂರ್ ಸಂತೋಷ್ ಬಂದಿದ್ದರು. ಇಂದಿನ ಎಪಿಸೋಡ್‌ನಲ್ಲಿ ಕಾರ್ತಿಕ್ ಹಾಗೂ ನಮ್ರತಾ ಆಗಮಿಸಿದ್ದಾರೆ. ಆದರೆ, ಇವರು ಬಂದಿರುವುದು ಮನೆಗೆ ದೊಡ್ಡ ಸಂತಸ ಕೊಟ್ಟಿಲ್ಲ. ಯಾಕೆಂದರೆ ಕಾರ್ತಿಕ್ ಹಾಗೂ ನಮ್ರತಾ ಮನೆಯ ಸದಸ್ಯರಿಗೆ ನಾಮಿನೇಷನ್ ಟಾಸ್ಕ್ ಕೊಟ್ಟಿದ್ದಾರೆ.

ಕಾರ್ತಿಕ್ ಹಾಗೂ ನಮ್ರತಾ ಎಂಟ್ರಿಯಿಂದ ನಾಮಿನೇಷನ್ ಕಿಚ್ಚು ಇನ್ನೂ ಹೆಚ್ಚಾಗಿದೆ. ನಿನ್ನೆ ಉಗ್ರಂ ಮಂಜು ಹಾಗೂ ಶಿಶಿರ್ ನಡುವೆ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ ಜಗಳ ಆಗಿತ್ತು. ಧನರಾಜ್ ಆಚಾರ್ ಹಾಗೂ ರಜತ್ ಕಿಶನ್ ನಡುವೆ ಮತ್ತೊಂದು ದೊಡ್ಡ ಜಗಳ ನಡೆದಿದೆ. ಇದು ಮುಂದಿನ ಹಂತಕ್ಕೋಗಿ ಕೈ-ಕೈ ಮಿಲಾಯಿಸಿದ್ದಾರೆ. ಹೀಗೆ ಬಂದ ಅತಿಥಿಗಳ ಮುಂದೆಯೇ ಸೀಸನ್ 11 ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು.

ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಸೇಡಿನ ಕಿಚ್ಚು ಇನ್ನೂ ನಿಂತಿಲ್ಲ. ನಾಮಿನೇಷನ್ ಫೈಟ್‌ನಲ್ಲಿ ಮೋಕ್ಷಿತಾ ಮೇಲೆ ಮಸಿ ಸುರಿದಿರುವ ಗೌತಮಿ ಅವರು ತಮ್ಮ ಸೇಡಿನ ಹೋರಾಟ ಮುಂದುವರಿಸಿದ್ದಾರೆ. ಮೋಕ್ಷಿತಾ ಹಾಗೂ ಗೌತಮಿ ಅವರ ಜಗಳ ನಾಮಿನೇಷನ್‌ನಲ್ಲಿ ಕುತೂಹಲ ಕೆರಳಿಸಿದೆ. ಅತ್ತ ಐಶ್ವರ್ಯ ಅವರು ತ್ರಿವಿಕ್ರಮ್‌ ಮುಖಕ್ಕೆ ಮಸಿ ಬಳೆದು ನಾಮಿನೇಟ್ ಮಾಡಿದ್ದಾರೆ.

ಕೈ-ಕೈ ಮಿಲಾಯಿಸಿದ ಧನರಾಜ್-ರಜತ್:

ಧನರಾಜ್,​ ರಜತ್​ ಅವರನ್ನು ನಾಮಿನೇಟ್​ ಮಾಡಿದ್ದರು. ಇದೇ ವಿಚಾರಕ್ಕೆ ರಜತ್​ ಧನರಾಜ್​ ಜೊತೆಗೆ ಕೈ ಕೈ ಮಿಲಾಯಿಸಿದ್ದಾರೆ. ತನ್ನನ್ನು ನಾಮಿನೇಟ್ ಮಾಡಿದ್ದಕ್ಕೆ ಧನರಾಜ್ ವಿರುದ್ಧ ರೊಚ್ಚಿಗೆದ್ದ ರಜತ್, ಯಾವನೋ ನೀಡಿದ್ದ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡ್ತಾ ಇದ್ದಾನೆ ಗುಗ್ಗು ನನ್ನ ಮಗ. ನಾನು ಎಂಥ ತಲೆ ಕೆಟ್ಟ ನನ್ನ ಮಗ ಅಂತ ನಿನಗಿನ್ನೂ ಗೊತ್ತಿಲ್ಲ. ನನ್ನ ಹತ್ರ ಇವೆಲ್ಲಾ ಆಟಗಳನ್ನ ಆಡ್ಬೇಡ. ಅದಕ್ಕೆ ಕಣೋ ನಿನಗೆ ಮಗು ಅಂತ ಕರೆಯೋದು ಎಂದಿದ್ದಾರೆ.

ಇದಕ್ಕೆ ಕೌಂಟರ್ ಕೊಟ್ಟ ಧನರಾಜ್, ಅಂಕಲ್, ನಿಮ್ಮ ಲೆವೆಲ್‌ ನನಗೆ ಗೊತ್ತಾಗಿದೆ. ನಾನು ಆಟ ಆಡೋದಕ್ಕೆ ಬಂದಿರುವುದು ಇಲ್ಲಿಗೆ ಎಂದು ಹೇಳಿದ್ದಾರೆ. ನಂತರ ಇಬ್ಬರ ನಡುವಿನ ಗುದ್ದಾಟ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮನೆಯವರು ಬಿಡಿಸಲು ಪ್ರಯತ್ನಿಸಿದರೂ, ಪರಸ್ಪರ ಕೈಮಾಡಲು ಇಬ್ಬರೂ ಮುಂದಾಗಿದ್ದಾರೆ. ಬಳಿಕ ಓಡಿ ಬಂದ ಮಂಜಣ್ಣ ಹಾಗೂ ಗೌತಮಿ ಗಲಾಟೆ ನಿಲ್ಲಿಸುವ ಪಯತ್ನ ಮಾಡಿದ್ದಾರೆ.

BBK 11: ನಾಮಿನೇಷನ್ ಪ್ರಕ್ರಿಯೆ ವೇಳೆ ಕೈ-ಕೈ ಮಿಲಾಯಿಸಿದ ರಜತ್-ಧನರಾಜ್