Tuesday, 13th May 2025

VenuGopal Column: ನ್ಯಾಯಾಂಗದ ಮೇಲೆ ಒತ್ತಡ ಹಾಕುವ ಯತ್ನ

ವಿಶ್ಲೇಷಣೆ

ವೇಣುಗೋಪಾಲ್‌, ಮೈಸೂರು

ಮುಡಾ’ ಪ್ರಕರಣದಲ್ಲಿ ‘ಜಾರಿ ನಿರ್ದೇಶನಾಲಯ’ (ಇ.ಡಿ) ಸಂಸ್ಥೆಯು ನಿನ್ನೆ ತಾನೇ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ‘ಸಂವಹನ’ವೊಂದನ್ನು ರವಾನಿಸಿದೆ. ಇದರ ಹಿಂದಿನ ಉದ್ದೇಶವನ್ನು ತಿಳಿಯುವುದು ಅಗತ್ಯ.
ಮೈಸೂರಿನ ‘ಮುಡಾ’ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯದ ಆದೇಶದ ಅನುಸಾರ ಎಫ್
ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ತನಿಖಾ ವರ‌ದಿಯನ್ನು ಸಲ್ಲಿಸಲು ನ್ಯಾಯಾಲಯವು ೩ ತಿಂಗಳ ಕಾಲಾವಕಾಶ ನೀಡಿದೆ.

ಈ ನಡುವೆ ‘ಇ.ಡಿ.’ ಕೂಡ ತನಿಖೆಯನ್ನು ಕೈಗೊಂಡಿದೆ. ಪಿಎಂಎಲ್‌ಎ ಕಾಯ್ದೆಯ ಪ್ರಕಾರ ಇ.ಡಿ. ಸ್ವತಂತ್ರ ತನಿಖಾ ಸಂಸ್ಥೆಯಲ್ಲ. ಅಂದರೆ ಇ.ಡಿ.ಗೆ ತಾನೇ ಎಫ್‌ ಐಆರ್ ಹಾಕಿ ತನಿಖೆ ಮಾಡುವ ಅಧಿಕಾರವಿಲ್ಲ.

ದೇಶದ ಯಾವುದೊಂದು ಪೊಲೀಸ್ ಠಾಣೆಯು ಅದಾಗಲೇ ಎಫ್‌ ಐಆರ್ ದಾಖಲಿಸಿದ್ದು, ಅದರಲ್ಲಿ ಪಿಎಂಎಲ್‌ಎಗೆ ಸಂಬಂಧಿಸಿದ ಅಪರಾಧಗಳು ಉಲ್ಲೇಖಿಸಲ್ಪಟ್ಟಿದ್ದರೆ, ಆಗ ಅಂಥ ತನಿ ಖೆಯನ್ನು ತಾನು ಕೂಡ ಮಾಡುವ ಅಽಕಾರ ಇ.ಡಿ.ಗೆ ಇದೆ.

ಆದರೆ ಈ ತನಿಖೆಯು ಮೂಲತಃ ಪೊಲೀಸರಂತೆ ಅಲ್ಲ. ಇ.ಡಿ.ಯು ಕೇಂದ್ರದ ಆರ್ಥಿಕ ಇಲಾಖೆಯ ಅಡಿಯಲ್ಲಿ
ಬರುತ್ತಿದ್ದು, ದೇಶದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುವಂಥ ಪ್ರಕರಣಗಳು ಅಂದರೆ, ಹವಾಲಾ, ಅಂತಾ ರಾಷ್ಟ್ರೀಯ ಆರ್ಥಿಕ ಅಪರಾಧ, ಡ್ರಗ್ ಮಾಫಿಯಾ, ಅಂಡರ್‌ವರ್ಲ್ಡ್ ಮಾಫಿಯಾ, ಶೆಲ್ ಕಂಪನಿಗಳ ಅಕ್ರಮ ಇತ್ಯಾದಿ ಗಂಭೀರ ಪ್ರಕರಣಗಳನ್ನು ತನಿಖೆ ಮಾಡಿ ದೇಶದ ಆರ್ಥಿಕ ಸ್ಥಿತಿಯನ್ನು ಕಾಪಾಡುವ ಸಲುವಾಗಿ ಇ.ಡಿ. ಇರುತ್ತದೆ.

ಯಾವ ಪ್ರಕರಣಗಳನ್ನು ಇ.ಡಿ. ತನಿಖೆ ಮಾಡಬಹುದೆಂದು ಪಿಎಂಎಲ್‌ಎ ಕಾಯ್ದೆಯು ಹೇಳುತ್ತದೆ; ಇದರಲ್ಲಿ ಭ್ರಷ್ಟಾಚಾರ-ನಿರೋಧ ಪ್ರಕರಣವೂ ಇರುವುದರಿಂದ ಇ.ಡಿ.ಯು ‘ಮುಡಾ’ ಅವ್ಯವಹಾರದ ತನಿಖೆಯನ್ನು ಕೈಗೊಂಡಿದೆ. ಆದರೆ ಇದರಲ್ಲಿ ಆಶ್ಚರ್ಯ ಮೂಡಿಸುವ ಸಂಗತಿಯೆಂದರೆ, ನಮ್ಮ ದೇಶದಲ್ಲಿ ಸುಮಾರು 25000 ಶೆಲ್ ಕಂಪನಿಗಳು ವ್ಯವಹರಿಸುತ್ತಿವೆ ಎಂದು ಲೋಕಸಭೆಯಲ್ಲಿ ತಿಳಿಸಲಾಗಿದೆ. ಡ್ರಗ್ಸ್ ಮಾಫಿಯಾದಂಥ ಗಂಭೀರ ಪ್ರಕರಣ ಗಳು ಬಹಳಷ್ಟು ನೋಂದಾಯಿಸಲ್ಪಟ್ಟಿವೆ. ಭ್ರಷ್ಟಾಚಾರದ ಸಾವಿರಾರು ಪ್ರಕರಣಗಳ ಕುರಿತು ಎಫ್ಐಆರ್ ದಾಖಲಿಸಲ್ಪಟ್ಟಿದೆ.

ಹೀಗಿರುವಾಗ, ಇಂಥ ಗಂಭೀರ ಪ್ರಕರಣಗಳ ತನಿಖೆಯನ್ನು ಬಿಟ್ಟು ಒಂದು ಜಿಲ್ಲಾ ಮಟ್ಟದ ಸಂಸ್ಥೆಯಲ್ಲಿ (ಮುಡಾ) ನಡೆದಿರಬಹುದಾದ ಅಕ್ರಮದ ತನಿಖೆಗೆ ಇ.ಡಿ.‌ ಬಂದಿರುವುದು ಹೇಗೆ? ಇಷ್ಟಕ್ಕೂ, ಇ.ಡಿ.ಗೆ ರಾಜ್ಯದ ಪೊಲೀಸರಿಂದ ವರದಿಯಾಗದೇ, ಇ.ಡಿ.ಯು ‘ಸುಮೊಟೋ’ ಪ್ರಕರಣವನ್ನು ದಾಖಲಿಸಿದೆ! ರಾಷ್ಟ್ರದಲ್ಲಿ ಸರಿಸುಮಾರು 800 ಜಿಲ್ಲೆಗಳಿದ್ದು, ಆ ಯಾವ ಜಿಲ್ಲಾ ಮಟ್ಟದ ಸಂಸ್ಥೆಗಳ ಅಕ್ರಮದ ಬಗ್ಗೆ ತನಿಖೆ ಮಾಡದೇ ಈ ಪ್ರಕರಣಕ್ಕೆ
ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಇ.ಡಿ.ಯಲ್ಲಿ ಪೊಲೀಸ್ ಇಲಾಖೆಯಂತೆ ಬಹಳಷ್ಟು
ಅಧಿಕಾರಿಗಳು ಇರುವುದಿಲ್ಲ. ಇಡೀ ರಾಷ್ಟ್ರದಲ್ಲಿ ಕೆಲವೇ ವಲಯ ಕಚೇರಿಗಳಿವೆಯಷ್ಟೇ.

Show me accused, I wll tell you the Crime ಎಂಬಂತೆ ಇ.ಡಿ. ನಡೆಯುತ್ತಿರುವುದಂತೂ ಸ್ಪಷ್ಟ. ಇಲ್ಲಿ ಇ.ಡಿ.ಗೆ ಆರೋಪಕ್ಕಿಂತ ಆರೋಪಿಯೇ ಮುಖ್ಯವಾದಂತಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ಇ.ಡಿ. ಕಳಿಸಿರುವ ವರದಿಯನ್ನು ಗಮನಿಸಬೇಕು. ಈ ವರದಿಯನ್ನು ಕಳಿಸಿರುವ ಸಮಯ ಮತ್ತು ಅದು ಬಹಿರಂಗವಾದ ಪರಿಯು ಇ.ಡಿ.ಯ Credentials ಬಗ್ಗೆ ಅನುಮಾನ ಹುಟ್ಟಿಸುತ್ತದೆ. ಈ ತಿಂಗಳ 10ರಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ, ‘ಮುಡಾ’ ಪ್ರಕರಣವನ್ನು ಸಿಬಿಐಗೆ ವಹಿಸಬೇಕೇ ಎಂಬ ಬಗ್ಗೆ ವಾದ ನಡೆಯುವುದಿದೆ. ಈ ಪ್ರಕರ ಣದಲ್ಲಿ ಈವರೆಗಿನ ತನಿಖಾ ವರದಿಯನ್ನು ಸಲ್ಲಿಸುವಂತೆ, ಈಗಾಗಲೇ ಲೋಕಾಯುಕ್ತ ಪೊಲೀಸರಿಗೆ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ. ಇಂಥ ಸಮಯ ದಲ್ಲಿ ಇ.ಡಿ. ಯು ‘ಸಂವಹನ’ವನ್ನು ಲೋಕಾಯುಕ್ತಕ್ಕೆ ಕಳುಹಿಸಿಕೊಟ್ಟಿದೆ!

ವಾಸ್ತವವಾಗಿ ಇ.ಡಿ. ಇಂಥ ವರದಿಯನ್ನು ಸಲ್ಲಿಸಬೇಕಿರುವುದು ತನ್ನ ಪ್ರಕರಣಕ್ಕೆ ಸಂಬಂಸಿದ ನ್ಯಾಯಾಲಯಕ್ಕೆ!
ಲೋಕಾಯುಕ್ತ ಪೊಲೀಸ್ ತನಿಖೆಯು ಸ್ವತಂತ್ರವಾಗಿದ್ದು, ಅದು ಇ.ಡಿ.ಯಿಂದ ಯಾವುದೇ ಮಾಹಿತಿಯ ವಿನಿಮ ಯಕ್ಕೆ ಕೇಳಿರುವುದೂ ಇಲ್ಲ!

ಎಲ್ಲಕ್ಕಿಂತ ಬಹುಮುಖ್ಯವಾಗಿ, ಇ.ಡಿ. ಕಳಿಸಿರುವ ‘ಸಂವಹನ’ಕ್ಕೆ ಯಾವುದೇ ಸಾಕ್ಷ್ಯ ನಿಯಮದ ಮಾನ್ಯತೆ
ಇರುವುದಿಲ್ಲ. ಇಂಥ ವರದಿಯನ್ನು ಅನುಸರಿಸಬೇಕಾದ ಯಾವುದೇ ಕಾನೂನಿನ ಒತ್ತಾಯವೂ ಇರುವುದಿಲ್ಲ. ಜತೆಗೆ
ಇ.ಡಿ. ಕಳಿಸಿದ ವರದಿ, ಹೇಳಿಕೆಗಳನ್ನು ಪಾಲಿಸಬೇಕೆಂಬ ಕಡ್ಡಾಯವೂ ಇರುವುದಿಲ್ಲ. ಇದು ಕೇವಲ ಮಾಹಿತಿ
ವಿನಿಮಯವಷ್ಟೇ. ಇಂಥ ಮಾಹಿತಿಯ ವಿನಿಮಯವನ್ನು, ಸಾಮಾನ್ಯವಾಗಿ ಇ.ಡಿ.ಯು ಯಾವುದೇ ಅಪರಾಧ
ನಡೆದಿರುವ ಬಗ್ಗೆ ತನ್ನ ಗಮನಕ್ಕೆ ಬಂದಾಗ ಅದನ್ನು ಸಂಬಂಧಿಸಿದ ಐಟಿ ಇಲಾಖೆ, ಕೇಂದ್ರ ವಿಜಿಲೆನ್ಸ್, ಒಂದು
ರಾಜ್ಯದ ಪೊಲೀಸ್ ಇತ್ಯಾದಿಯವರ ಗಮನಕ್ಕೂ ತಂದು ಆಯಾ ಇಲಾಖೆಯು ತನ್ನ ಕಾನೂನಿನ ಅನುಸಾರವಾಗಿ
ಕೂಡ ತನಿಖೆ ಮಾಡಬಹುದು ಎಂಬ ಕಾರಣಕ್ಕಾಗಿ ಪಿಎಂಎಲ್‌ಎ ಕಾಯ್ದೆಯ ಕಲಂ 66ರ ಅಡಿಯಲ್ಲಿ ಮಾಹಿತಿ
ವಿನಿಮಯ ಮಾಡಿಕೊಳ್ಳುತ್ತದೆ. ಇ.ಡಿ.ಯು ಲೋಕಾಯುಕ್ತಕ್ಕೆ ಕಳಿಸಿದ ಸಂವಹನವು ಸಾರ್ವಜನಿಕರಿಗೆ ಬಹಿರಂಗವಾದದ್ದು ಪಿಟಿಐ ಮತ್ತು ಎಎನ್‌ಐ ಮೂಲಕ ಮಾತ್ರ!

ಇ.ಡಿ. ಅಧಿಕಾರಿಗಳು ತಾವೇ ಯಾವುದೇ ಪತ್ರಿಕಾ ಪ್ರಕಟಣೆಯನ್ನೂ ನೀಡಿಲ್ಲ. ಹಾಗಾಗಿ ಈ ತನಿಖಾ ಮಾಹಿತಿಯನ್ನು ಸೋರಿಕೆ ಮಾಡಿದವರು ಯಾರು? ಕಾನೂನು ಮತ್ತು ಸುವ್ಯವಸ್ಥೆಯು ಒಂದು ರಾಜ್ಯದ ಸ್ವತಂತ್ರ ವಿಷಯವಾಗಿದೆ. ಆಯಾ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಪರಾಧಗಳ ತನಿಖೆ ಮಾಡಲು ಸ್ವತಂತ್ರವಿದ್ದು ಕೇಂದ್ರವು ಹಸ್ತಕ್ಷೇಪ ಮಾಡುವಂತಿಲ್ಲ. ಲೋಕಾಯುಕ್ತ ಪೊಲೀಸರು ಕಾನೂನಿನ ಮೇರೆಗೆ ತನಿಖೆಯನ್ನು ಪೂರ್ಣಮಾಡುವ ಮೊದಲೇ, ಅನುಮಾನದಿಂದ ನೋಡುವುದು ಒಳ್ಳೆಯ ಬೆಳವಣಿಗೆಯಲ್ಲ.

ರಾಜ್ಯದ ಅಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ಕುಣಿಯುವವರು ಎಂದು ತೀರ್ಮಾನಕ್ಕೆ ಬರುವುದಾದರೆ, ಕೇಂದ್ರ ಸರಕಾರದ ಅಧಿಕಾರಿಗಳು ಕೂಡ ಹಾಗೆಯೇ ಮಾಡುತ್ತಾರೆಂಬ ತೀರ್ಮಾನಕ್ಕೆ ಬರಬೇಕಾಗುವುದು. ಇದು ಅತ್ಯಂತ ಗಂಭೀರ, ದುರದೃಷ್ಟಕರ. ಒಂದು ರಾಜ್ಯದ ಪೊಲೀಸರ ತನಿಖೆಯಲ್ಲಿ, ಹಿಂಬಾಗಿಲ ಮೂಲಕ, ‘ಸಂವಹನ’ದ ಹೆಸರಿನಲ್ಲಿ ಒತ್ತಡ ಹಾಕುವುದು ಕಾನೂನುಬಾಹಿರ. ಇ.ಡಿ. ಹಾಗೆ ಮಾಡಿದರೆ ಅದು ರಾಷ್ಟ್ರದ ಒಕ್ಕೂಟ ವ್ಯವಸ್ಥೆ ಯನ್ನು ಅಣಕ ಮಾಡಿದಂತೆ. ಅಂತೆಯೇ ಉಚ್ಚ ನ್ಯಾಯಾಲಯದಲ್ಲಿ, ‘ಮುಡಾ’ ಪ್ರಕರಣವನ್ನು ಸಿಬಿಐ ತನಿಖೆ ವ್ಯಾಪ್ತಿಗೆ ತರುವ ಸಲುವಾಗಿ ಇ.ಡಿ.ಯು ಈ ಕೆಲಸ ಮಾಡಿದ್ದರೆ ಅದು ಉಚ್ಚ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವೆಂದೇ ಹೇಳಬೇಕಾಗುವುದು.

ಈ ತಿಂಗಳು ೧೦ರಂದು, ‘ಮುಡಾ’ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಉಚ್ಚ ನ್ಯಾಯಾಲಯಕ್ಕೆ ‘ತಮ್ಮ
ತನಿಖಾ ವರದಿ’ಯನ್ನು ಸಲ್ಲಿಸುವರು; ಅದನ್ನು ನ್ಯಾಯಾಲಯವು ಪರಿಶೀಲಿಸಿ, ತನ್ನ ಆದೇಶವನ್ನು ನೀಡುವುದು.
ಹಾಗಾಗಿ ತನ್ನ ‘ಸಂವಹನ’ವೂ ಅಂಥ ಲೋಕಾಯುಕ್ತ ವರದಿಯ ಭಾಗವಾಗಲಿ ಎಂಬ ದುರ್ಭಾವದಿಂದ, ಈ
‘ಸಂವಹನ’ ದಾರಿಯನ್ನು ಇ.ಡಿ. ಹುಡುಕಿಕೊಂಡಿದ್ದರೆ, ಇದು ಇ.ಡಿ.ಗೇ ತಿರುಗುಬಾಣವಾಗುವುದು ಖಚಿತ.
ಇ.ಡಿ.ಯಂಥ ಉನ್ನತ ಸಂಸ್ಥೆ, ತನ್ನ ಯಾವುದೇ ವರದಿಯನ್ನು ಕಾನೂನು ಮೇರೆಗೆ ನ್ಯಾಯಾಲಯಕ್ಕೆ ಸಲ್ಲಿಸದೇ,
ಹೀಗೆ ವಾಮಮಾರ್ಗವನ್ನು ಅನುಸರಿಸಿದರೆ, ‘ಅದು ಪಕ್ಷಪಾತಿ ಧೋರಣೆ ಹೊಂದಿದೆ, ವಿರೋಧ ಪಕ್ಷಗಳನ್ನು
ಹಣಿಯಲು ತನ್ನನ್ನು ದುರ್ಬಳಕೆ ಮಾಡಿಕೊಳ್ಳಲು ತಾನೇ ಅನುಮತಿಸಿದೆ’ ಎಂದೇ ಭಾವಿಸಬೇಕಾಗುವುದು.

(ಲೇಖಕರು ವಕೀಲರು)

ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ