Tuesday, 13th May 2025

ಆರೆಸ್ಸೆಸ್‌: ರಾಷ್ಟ್ರೀಯತೆಯ ಬೃಹತ್‌ ಶಕ್ತಿ

rss

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

dascapital1205@gmail.com

ವಾಯ್ಸ್ ಆಫ್ ಇಂಡಿಯಾ ಗ್ರಂಥಮಾಲೆ, ಪ್ರಕಾಶನ ಸ್ಥಾಪಿಸಿ, ಸರ್ವವನ್ನೂ ಅದಕ್ಕರ್ಪಿಸಿ, ಸಾರ್ಥಕ್ಯದ ಬದುಕನ್ನು ಬಾಳಿ,
ಭಾರತೀಯರನ್ನು ಆತ್ಮವಿಸ್ಮೃತಿಯಿಂದ ಎಬ್ಬಿಸಿದ ಗೋಯೆಲ್ ಅವರಿಗೆ ದೆಹಲಿಯ ಆರೆಸ್ಸೆಸ್ ಸಮಾರಂಭಕ್ಕೆ ಜಯಪ್ರಕಾಶರನ್ನು ಒಪ್ಪಿಸಿ ಕರೆತರುವಂತೆ ಪ್ರಾರ್ಥಿಸಲಾಯಿತು.

ಈ ವಿಚಾರವನ್ನು ಗೋಯೆಲರು ಜಯಪ್ರಕಾಶರಿಗೆ ತಿಳಿಸಿದಾಗ ಅವರು ಗಾಬರಿಗೊಂಡು ಹೀಗೆಂದರು: ‘ಸೀತಾರಾಂ! ನನ್ನನ್ನು ತುಂಬಾ ಇಕ್ಕಟ್ಟಿನಲ್ಲಿ ಸಿಲುಕಿಸಿದೆ! ಕೋಮುವಾದಿ ಸಂಘಟನೆಯ ಉತ್ಸವಕ್ಕೆ ನಾನು ಬಂದರೆ ನನ್ನ ಹೆಸರೇನಾಗುತ್ತದೆ? ಜನ ಏನು ತಿಳಿಯು ತ್ತಾರೆ?. ನೀವು ಪೂರ್ವಾಪರ ವಿಚಾರಿಸದೆಯೇ ಒಂದು ರಾಷ್ಟ್ರಭಕ್ತ ಸಂಸ್ಥೆಯನ್ನು ಕೋಮುವಾದೀ ಎಂಬ ಗುಂಪಿಗೆ ಸೇರಿಸಿದ್ದೀರಿ. ಅಪಪ್ರಚಾರವನ್ನು ಪರಾಮರ್ಶೆ ಮಾಡದೆ ಹೀಗೆನ್ನುವುದು ಪ್ರತಿಭೆಯೂ ಅಲ್ಲ; ಪ್ರಾಮಾಣಿಕತನವೂ ಅಲ್ಲ.

ಸ್ವತಂತ್ರ ವಿಚಾರ, ಪ್ರತ್ಯಕ್ಷ ಅವಲೋಕನವಿಲ್ಲದೆ ಸತ್ಯ- ಮಿಥ್ಯೆಗಳ ವ್ಯತ್ಯಾಸ ತಿಳಿಯು ವುದಿಲ್ಲ. ಕೋಮುವಾದೀ ಎನ್ನಲು ಪ್ರಮಾಣ ಬೇಡವೇ?’ ಎಂದು ಗೋಯೆಲರು ಕೇಳಿ ದಾಗ ಜಯಪ್ರಕಾಶರಿಗೆ ಜ್ಞಾನೋದಯವಾಗಿ, ಮನಸ್ಸು ಜಾಗೃತಗೊಂಡು ಸಮಾರಂಭಕ್ಕೆ ಹೋಗಿ, ಭಗವಧ್ವಜದ ಬಗ್ಗೆ ಇದ್ದ ಇದು ಶಿವಾಜಿ ಕಾಲದ ಕೋಮುಚಿಹ್ನೆ ಎಂಬ ಭ್ರಮೆಯೂ ನೀಗಿ, ಆರೆಸ್ಸೆಸ್ ಬಗ್ಗೆ ಗಟ್ಟಿಯಾಗಿ ನಾಕು ಹೊಗಳಿಕೆಯ ಮಾತನ್ನೂ ಅಡದೇ ಕೊನೆಯುಸಿರೆಳೆದರು.

ಆರೆಸ್ಸೆಸ್ ಕೋಮುವಾದಿಯೇ? ಅಥವಾ ಕಾಂಗ್ರೆಸ್ಸೇ? ಅಥವಾ ಕಮ್ಯುನಿಸ್ಟೇ? ದೇಶ ಒಡೆದ ಕಾಂಗ್ರೆಸ್ಸಿನ ಮುಂದೆ ದೇಶರಕ್ಷಣೆಯ ಧ್ಯೇಯವನ್ನಿಟ್ಟುಕೊಂಡು ಹುಟ್ಟಿದ ಆರೆಸ್ಸೆಸ್ ಕೋಮುವಾದಿ ಎನ್ನಲು ಒಂದೇ ಒಂದು ನಿದರ್ಶನವನ್ನು ಕೊಡಲು ಇನ್ನೂ ಸಾಧ್ಯವಾಗಲಿಲ್ಲ. ಮುಸ್ಲಿಂ ಲೀಗನ್ನು ದೇಶ ಭಕ್ತ ಪಕ್ಷ ಎಂದ ಇಂದಿರಾಗಾಂಧಿ ಉಗ್ರ ರಾಷ್ಟ್ರೀಯತೆಯಿಲ್ಲದ, ಸೆಕ್ಯುಲರಿಸಮ್ಮಿನ ನಿಜವಾದ ಮೌಲ್ಯಗಳನ್ನು ಹೊಂದಿದ ಆರೆಸ್ಸೆಸ್ಸನ್ನು ಗುಮಾನಿಸಿದರು. ಹೊರಗಿಟ್ಟೇ ರಾಜಕಾರಣವನ್ನು ಮಾಡಿದರು.

ರಾಷ್ಟ್ರೀಯತೆಯ ಮೌಲ್ಯಗಳನ್ನು ಪ್ರತಿನಿಧಿಸುವವರು ಯಾವುದೇ ಮತದವರು ಇದ್ದರೂ ಇದಕ್ಕೆ ಸೇರಬಹುದು. ರಾಷ್ಟ್ರದ ದಿಟ್ಟಶಕ್ತಿಯಾದ ಆರೆಸ್ಸೆಸ್ ಹುಟ್ಟಿದ ಸಂದರ್ಭ ಸನ್ನಿವೇಶಗಳನ್ನು ಅರಿಯುವುದರ ಅದರ ಅಗತ್ಯತೆ, ವ್ಯಾಪಕತೆ ಅರಿವಾಗುತ್ತದೆ. 1925ರ ಸಪ್ಟೆಂಬರ್ ೨೭ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಡಾ. ಕೇಶವ ಬಲಿರಾಮ ಹೆಡೆಗವಾರ್ ಹುಟ್ಟುಹಾಕಿದ ಇದು  ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘ.

ರಾಷ್ಟ್ರಾದ್ಯಂತ 60 ಸಾವಿರಕ್ಕೂ ಹೆಚ್ಚು ಶಾಖೆಗಳಿದ್ದು, ಹಿಂದೂ ಸಂಘಟನೆ, ಐಕ್ಯತೆ, ವ್ಯಕ್ತಿತ್ವ ನಿರ್ಮಾಣ ಮತ್ತು ವಿಕಸನ,
ನಾಗರಿಕ ಪ್ರಜ್ಞೆ, ಸಮುದಾಯ ಜೀವನ, ಸಮಾಜ ಸೇವೆ, ದೇಶಭಕ್ತಿ ಮೊದಲಾದ ರಾಷ್ಟ್ರಕ್ಷೇಮದ ಗುಣಗಳನ್ನು ಬೆಳೆಸುವುದಕ್ಕೆ ತನ್ನ ಚಟುವಟಿಕೆಗಳನ್ನು ನಿತ್ಯವೂ ಒಂದು ವಿಶಾಲವಾದ ಬಯಲಿನಲ್ಲಿ ತಾಸಿಗೂ ಹೆಚ್ಚಿನ ಅವಧಿಯಲ್ಲಿ ನಡೆಸುತ್ತದೆ.

ಭಾರತೀಯ ಗತ ಇತಿಹಾಸ ಮತ್ತು ಪರಂಪರೆಯ ವೈಭವವನ್ನು ಮೆಲುಕುಹಾಕುತ್ತಾ ವರ್ತಮಾನದಲ್ಲಿ ದೇಶಹಿತ ಚಿಂತನೆ ಯೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಕಾಣುತ್ತಾ ದೇಶಕಟ್ಟುವ ಕಾರ್ಯದಲ್ಲಿ ಸೇವೆಸಲ್ಲಿಸುತ್ತಿದೆ. ಅಪಾಯಕಾರಿ ಸನ್ನಿವೇಶಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ, ಅಪಾಯದಲ್ಲಿರುವ ಜನರಕ್ಷಣೆ, ಜೀವಜಾಲ ರಕ್ಷಣೆ, ಪುನರ್ವಸತಿ, ಗ್ರಾಮೀಣ ಅಭಿವೃದ್ಧಿ, ಸ್ವಚ್ಛತೆ ಗಳಲ್ಲಿ ಸ್ವಯಂಸೇವಕರನ್ನು ತೊಡಗಿಸಿಕೊಳ್ಳುತ್ತಾ ಅನೇಕ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸಂಘವು ಮಹತ್ತರವಾದ ಕಾರ್ಯವನ್ನು
ಮಾಡುತ್ತಿದೆ. ಉತ್ತಮ ಕಾರ್ಯಕರ್ತರನ್ನು, ನೇತಾರರನ್ನು ಸಂಘವು ನೀಡಿದೆ.

ಇದೇ ಸಂದರ್ಭದಲ್ಲಿ ದೇಶದ ಕೆಲವು ವಿದ್ಯಮಾನಗಳೊಂದಿಗೆ ಆರೆಸ್ಸೆಸ್ಸನ್ನು ತಳಕು ಹಾಕಲಾಗಿದೆ. ಆರೆಸೆಸ್ಸನ್ನು ಬರ್ಖಾಸ್ತು ಮಾಡುವವರೆಗೆ ಯೋಚನೆ-ಯೋಜನೆಗಳು ಉನ್ನತ ಮಟ್ಟದಲ್ಲಿ ನಡೆದಿದ್ದೂ ಇದೆ. ಈಗಲೂ ಇದೆಯೆನ್ನಿ. ತಂಡಕಟ್ಟಿ ದೇಶವನ್ನು ನಿಯಂತ್ರಿಸುವುದು ಸಂಘದ ಉದ್ದೇಶವಲ್ಲ. ಜಾತಿ-ಮತ-ಧರ್ಮದ ಭೇದವಿಲ್ಲದೆ ಇದು ಸಕ್ರಿಯವಾಗಿದೆ. ಇದರಲ್ಲಿ ಯಾವುದೇ ಔಪಚಾರಿಕ ಸದಸ್ಯತ್ವವಿಲ್ಲ. ವಯಸ್ಸಿನ ಅಂತರವಿಲ್ಲ. ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿದೆ. ದೇಣಿಗೆಯನ್ನು ಸ್ವೀಕರಿಸು ವಂತಿಲ್ಲ.

ಗುರು ಪೂರ್ಣಿಮೆಯ ದಿನ ಗುರುದಕ್ಷಿಣೆಯಾಗಿ ಸದಸ್ಯರಿಂದಲೇ ಹಣವನ್ನು ಪಡೆಯಲಾಗುತ್ತದೆ. ಭಾರತ ಮಾತೆಯನ್ನು
ಪೂಜಿಸಲಾಗುತ್ತದೆ. ತ್ಯಾಗ ಮತ್ತು ಸಾಂಸ್ಕೃತಿಕ ಪರಂಪರೆಯ ಕೇಸರಿ ಬಣ್ಣದ ಧ್ವಜವು ಸಂಕೇತವಾಗಿದೆ. ದೇಶವ್ಯಾಪಿ ಆರೆಸ್ಸೆಸ್ಸಿನ ಸೇವಾಕಾರ್ಯಗಳು ನಡೆಯುತ್ತವೆ. ದೇಶದೆಡೆ ಏನೇ ಸಮಸ್ಯೆಯಾದರೂ ಆರೆಸ್ಸೆಸ್ ಸಹಾಯಕ್ಕೆ ಮುಂದಾಗುತ್ತದೆ. ಅನೇಕ ಪ್ರತಿ ಕೂಲ ಮತ್ತು ವೈರುಧ್ಯಗಳ ನಡುವೆಯೆ ಶಾಖೆಗಳ ಸಂಖ್ಯೆ ಏರುತ್ತಿದೆ.

ಭಾರತವೆಂಬುದು ಯಾವುದೇ ವ್ಯಕ್ತಿ, ಸಮಾಜ, ಸರ್ಕಾರ ಅಥವಾ ಸಿದ್ಧಾಂತವಲ್ಲ. ಸಮಾಜವೇ ತನ್ನೆಲ್ಲ ಭೇದವನ್ನು ಮರೆತು ಒಂದಾಗಿಬಿಟ್ಟರೆ ಸರಕಾರ ಮತ್ತು ನಾಯಕರು ಬಗ್ಗಲೇಬೇಕಾಗುತ್ತದೆ. ಆಗ ದೇಶದ ಹಳಿ ತಪ್ಪುವುದಿಲ್ಲ. ಸ್ವಾತಂತ್ರ್ಯ ಪೂರ್ವ ದಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯೂ ವಿವಿಧ ಹಿನ್ನೆಲೆಯಿಂದ ಬಂದ ಅನೇಕ ವಿಚಾರವಂತರಿಗೆಲ್ಲ ಇದ್ದ ಒಂದೇ ಒಂದು ಚಿಂತೆಯೆಂದರೆ, ಈಗೇನೋ ನಮಗೆ ಸ್ವಾತಂತ್ರ್ಯ ಲಭಿಸಹುದು. ಆದರೆ ನಮಗೆ ಅಂಟಿರುವ ಈ ವ್ಯಾಧಿ ಮುಗಿಯುವುದಿಲ್ಲ.

ಎಲ್ಲಿಯವರೆಗೆ ಸಾಮಾನ್ಯ ಸಮಾಜವನ್ನು ಏಕಾತ್ಮತಾ ದರ್ಶನದ ಮೂಲಕ ಒಂದಾಗಿ ಕಾಣುವುದಿಲ್ಲವೋ, ಅಲ್ಲಿಯವರೆಗೆ ಈ ದುರ್ದೆಶೆ ಅಂತ್ಯವಾಗುವುದಿಲ್ಲ ಎಂಬುದು. ಸಂಘದ 3ನೇ ಶಿಕ್ಷಾವರ್ಗದಲ್ಲಿ ಪ್ರಣವ್ ಮುಖರ್ಜಿ ಹೇಳುವಂತೆ, ರಾಷ್ಟ್ರವೆಂದರೆ, ಒಂದು ಪ್ರದೇಶದಲ್ಲಿ, ಒಂದೇ ರೀತಿಯ ಸಂಸ್ಕೃತಿ, ಭಾಷೆ/ ಇತಿಹಾಸವನ್ನು ಹೊಂದಿದ ಜನರ ಗುಂಪು; ರಾಷ್ಟ್ರೀಯತೆ- ತಮ್ಮ
ದೇಶದ ಸತ್ವದ ಕುರಿತಾಗಿ ಇರುವ ಅಭಿಮಾನ; ದೇಶಭಕ್ತಿ – ತನ್ನ ದೇಶದ ಇರುವ ಭಕ್ತಿ ಮತ್ತು ತೀವ್ರವಾದ ಬೆಂಬಲ.

ಸಮಾಜದಲ್ಲಿ ಸಂಘಟನೆ ಮಾಡುವುದು ಸಂಘದ ಕಾರ್ಯವಲ್ಲ; ಸಮಾಜವನ್ನೇ ಸಂಘಟಿಸುವುದು. ಏಕೆಂದರೆ ಸಂಘಟಿತ ಸಮಾಜವೇ ಭಾರತದ ಭಾಗ್ಯವನ್ನು ಬದಲಿಸುತ್ತದೆನ್ನುತ್ತಾರೆ ಮೋಹನ ಭಾಗವತರು. ಭಾರತವು ಎಲ್ಲಾ ಅನುಮಾನಗಳಿಗೂ ಮೀರಿದ ಭೌಗೋಳಿಕ ಪ್ರತ್ಯೇಕತೆ ಅಥವಾ ರಾಜಕೀಯ ಶ್ರೇಷ್ಠತೆಯಿಂದ ಉತ್ಪತ್ತಿಯಾಗುವಂತೆಯೇ ಹೆಚ್ಚು ಗಾಢವಾದ ಆಧಾರ ವಾಗಿರುವ ಮೂಲಭೂತ ಏಕತ್ವವನ್ನು ಹೊಂದಿದೆ. ಈ ಐಕ್ಯತೆಯು ಅಸಂಖ್ಯಾತ ವೈವಿಧ್ಯತೆಯು ರಕ್ತ, ಬಣ್ಣ, ಭಾಷೆ, ಉಡುಗೆ, ಸ್ವಭಾವ, ನಡೆವಳಿಕೆ, ಪಂಥಗಳಿಂದ ಬಂದುದಾಗಿದೆ ಶ್ರೇಷ್ಠ ಇತಿಹಾಸಕಾರ ವಿನ್ಸೆಂಟ್ ಸ್ಮಿತ್ತಿನ ಈ ಮಾತುಗಳನ್ನು ಪ್ರಣವ್ ಮುಖರ್ಜಿ ಹೇಳುತ್ತಾ, ‘ನಮ್ಮ ಸಂವಿಧಾನದ ಮೂಲಕ ನಮ್ಮ ರಾಷ್ಟ್ರೀಯತೆ ಹರಿಯುತ್ತದೆ.

ಭಾರತೀಯ ರಾಷ್ಟ್ರೀಯತೆಯ ನಿರ್ಮಾಣವು ’ಸಾಂವಿಧಾನಿಕ ದೇಶಭಕ್ತಿ’ ಆಗಿದೆ. ಭಾರತದ ಆತ್ಮವು ಬಹುತ್ತ್ವ ಮತ್ತು ಸಹಿಷ್ಣುತೆ ಗಳಲ್ಲಿ ನೆಲೆಸಿದೆ. ನಮ್ಮ ಸಮಾಜದ ಈ ವಿವಿಧತೆಯು ಶತಮಾನಗಳ ಚಿಂತನೆಗಳ ಸಮೀಕರಣದ ಮೂಲಕ ಬಂದಿದೆ. ಸೆಕ್ಯುಲ ರಿಸಂ ಮತ್ತು ಒಳಗೊಳ್ಳುವಿಕೆ ನಮಗೆ ನಂಬಿಕೆಯ ವಿಷಯವಾಗಿದೆ. ಇದು ನಮ್ಮ ಸಂಯುಕ್ತ ಸಂಸ್ಕೃತಿಯಾಗಿದ್ದು, ಅದು ನಮ್ಮನ್ನು ಒಂದು ರಾಷ್ಟ್ರವನ್ನಾಗಿ ಮಾಡುತ್ತದೆ. ಭಾರತದ ರಾಷ್ಟ್ರೀಯತೆ ನಿಂತಿರುವುದು ಒಂದು ಭಾಷೆಯಿಂದಲ್ಲ, ಒಂದು
ರಿಲಿಜಿಯನ್‌ನಿಂದಲ್ಲ, ಶತೃವಿನಿಂದಲ್ಲ.

122 ಕ್ಕೂ ಹೆಚ್ಚಿನ ಭಾಷೆಗಳು ಮತ್ತು ತಮ್ಮ ದೈನಂದಿನ ಜೀವನದಲ್ಲಿ 1600 ಉಪಭಾಷೆಗಳನ್ನು ಬಳಸಿಕೊಳ್ಳುವ 1.3 ಶತಕೋಟಿ ಜನರ ‘ಪೆರಿನಿಯಲ್ ಯೂನಿವರ್ಸಲಿಸಂ’ ಇದು. ೭ ಪ್ರಮುಖ ಮತಗಳನ್ನು ಅನುಸರಿಸುತ್ತ ಭಾರತದಲ್ಲಿ 3 ಪ್ರಮುಖ
ಜನಾಂಗೀಯ ಗುಂಪುಗಳಾದ ಆರ್ಯನ್ನರು, ಮಂಗೋಲಿಯನ್ ಮತ್ತು ದ್ರಾವಿಡರು ಒಂದೇ ವ್ಯವಸ್ಥೆಯಲ್ಲಿ ವಾಸಿಸುತ್ತಾರೆ. ಒಂದು ಧ್ವಜ ಮತ್ತು ‘ಭಾರತಿ’ ಯ ಎಂಬ ಗುರುತಿನಡಿ ನಾವೆಲ್ಲ ಬದುಕುತ್ತೇವೆ; ಮತ್ತು ನಮಗೆ ಶತ್ರುಗಳು ಇಲ್ಲ. ಇವುಗಳೇ ಭಾರತ ವನ್ನು ವೈವಿಧ್ಯಮಯ ಮತ್ತು ಏಕೀಕೃತ ರಾಷ್ಟ್ರವನ್ನಾಗಿಸಿದೆ’ ಎನ್ನುತ್ತಾರೆ ಪ್ರಣವ್ ಜೀ.

ಹಿಂದೂ ಮಹಾಸಭಾ ಮತ್ತು ಸಂಘವನ್ನು ಒಪ್ಪದ ಗಾಂಧಿಯೂ 1934 ರಲ್ಲಿ ಶಿಕ್ಷಾವರ್ಗಕ್ಕೆ ಭೇಟಿ ನೀಡಿ ಅದರ ದಿನಚರಿ ಮತ್ತು ಧ್ಯೇಯವನ್ನು ಹೊಗಳಿದ್ದರು. ಗಾಂಧಿ ಹತ್ಯೆ ವಿಷಯದಲ್ಲಿ ಸಂಘವನ್ನು ದ್ವೇಷಿಸಿದ ಜೆಪಿಯವರು ತುರ್ತುಸ್ಥಿತಿ ಪರಿಸ್ಥಿತಿಯ ವಿರುದ್ಧ ಸಂಘದ ಆಂದೋಲನವನ್ನು ಮೆಚ್ಚಿದಷ್ಟೇ ಅಲ್ಲದೆ, 1977ರಲ್ಲಿ ಶಿಕ್ಷಾವರ್ಗದಲ್ಲಿ ಪಾಲ್ಗೊಂಡು ಸಂಘವನ್ನು ಹೊಗಳಿ ದ್ದರು.

ಚೀನಾದೊಂದಿಗಿನ ಯುದ್ಧದ ಸಂದರ್ಭದಲ್ಲಿ ಸಂಘವು ತೋರಿದ ರಾಷ್ಟ್ರಭಕ್ತಿಯನ್ನು ಮೆಚ್ಚಿದ ನೆಹರೂ 1963ರ ಗಣರಾಜ್ಯೋ ತ್ಸವದ ಪಥಸಂಚಲನಕ್ಕೆ 3000 ಸಾವಿರ ಸ್ವಯಂಸೇವಕರನ್ನು ಆಹ್ವಾನಿಸಿದ್ದರು. ಅದಕ್ಕೆ ವಿರೋಧಗಳು ಬಂದಾಗ ರಾಷ್ಟ್ರಭಕ್ತ ಭಾರತೀಯರನ್ನು ನಾನು ಆಹ್ವಾನಿಸಿದ್ದೇನೆ ಎಂದಿದ್ದರು. ಸಂಘದ ಶಾಖೆಗಳು ಹೆಚ್ಚಬೇಕು, ಮತ್ತಷ್ಟು ವಿಸ್ತಾರವಾಗಬೇಕೆಂಬ ಅಭಿಲಾಷೆಯನ್ನು ಅಂಬೇಡ್ಕರ್ ಹೊಂದಿದ್ದರು. ಭಾರತದ ವೈವಿಧ್ಯತೆ ವಿಶ್ವದಲ್ಲಿಯೇ ಸುಂದರವಾದುದು. ಹೊರಗೆ ಕಾಣುವ ಈ ವಿವಿಧತೆಯ ಸೌಂದರ್ಯವು ಒಂದು ಏಕತೆಯ ಆಧಾರದಲ್ಲಿ ಹುಟ್ಟಿದೆ. ಈ ಮೂಲಕವೇ ನಾವೆಲ್ಲ ಒಂದು ಭಾವವನ್ನು ಹೊಂದಿರಬೇಕು ಎನ್ನುವ ಮೋಹನ್ ಭಾಗವತರು ಯಾರು ಯಾವ ಮೂಲದಿಂದ ಬಂದರೂ ನಮ್ಮ ಜೀವನದ ಮೇಲೆ ಭಾರತೀಯ ಸಂಸ್ಕೃತಿಯ ಅಚ್ಚಳಿಯದ ಪ್ರಭಾವವಿದೆ.

ಎಲ್ಲರ ಪೂರ್ವಿಕರೂ ಒಬ್ಬರೇ, ಎಲ್ಲರಿಗೂ ಭಾರತಮಾತೆಯೇ ಮಾತೆ ಎಂದು ಹೇಳುತ್ತಾರೆ. ಆರೆಸೆಸ್ಸಿನದು ಡೆಮಾಕ್ರಟಿಕ್ ಮೈಂಡ್. ಸೌಹಾರ್ದತೆ, ಸೌಮ ನಸ್ಕತೆ, ಸೌಶೀಲ್ಯತೆ ಇದರ ಅಂತಃಸತ್ವ. ಜಾತ್ಯತೀತತೆಯನ್ನು ಉಪದೇಶಿಸುವ ಅಗತ್ಯ ಸಂಘಕ್ಕಿಲ್ಲ. ಭಾರ ತೀಯ ಪರಂಪರೆಯಲ್ಲಿ ಬದುಕುವ ಮತ-ಪಂಥ-ಧರ್ಮಗಳ ನಡುವೆಯೂ ಬಿರುಕಿಲ್ಲದೆ ರಾಷ್ಟ್ರೀಯತೆಯು ಸ್ವಯಂ ಚಾಲಿತ ವಾಗಿ ರಾಷ್ಟ್ರವಾಸಿಗಳಲ್ಲಿ ಹರಿಯುವಂತಾಗಬೇಕೆಂಬ ಮಹೋನ್ನತ ಅಭಿಲಾಷೆ ಈ ಸಂಘಟನೆಯದು.

ಜಗತ್ತಿನ ಅತಿದೊಡ್ಡ ಸಂಘಟನೆಯಾದ ಇದರಲ್ಲಿ 10 ಕೋಟಿಗೂ ಮಿಕ್ಕಿ ಸ್ವಯಂಸೇವಕರಿzರೆ. ಶಾಖೆಗಳೇ ಇದರ ಜೀವಾಳ. ಯಾವ ಧರ್ಮೀಯನಿಗೂ ಸಂಘವು ಮುಕ್ತವಾಗಿದೆ. ರಾಷ್ಟ್ರೀಯವಾದಿ ಮುಸ್ಲಿಂರ ಒಂದು ವಿಭಾಗವೇ ಸಂಘದಲ್ಲಿದೆ. ಕೂಡಿ ಬಾಳುವು ದನ್ನು, ಕೂಡಿ ಶ್ರಮಿಸುವುದನ್ನು, ಸೋದರ ಭಾವವನ್ನು, ಪರಸ್ಪರರ ಹಿತಾಸಕ್ತಿಯನ್ನು, ರಾಷ್ಟ್ರೀಯ ಸಂಪತ್ತಲ್ಲಿ ಸಮಪಾಲನ್ನು, ರಾಷ್ಟ್ರದ ಭದ್ರತೆ ಮತ್ತು ರಕ್ಷಣೆಯನ್ನು ಬೋಽಸುವ ಸಂಘವು ಅದಮ್ಯ ರಾಷ್ಟ್ರೀಯತೆಯ ಬೃಹತ್ ಶಕ್ತಿಯಾಗಿ ದೇಶಸೇವೆಯಲ್ಲಿ ನಿರತವಾಗಿದೆ.