Tuesday, 20th May 2025

ಪರಿಹಾರದ ಪ್ರತಿ ವಿತರಣೆ

ತುಮಕೂರು: ಗ್ರಾಮಾಂತರ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೂರು ಗ್ರಾಮದಲ್ಲಿ ಇಂದು ಸನ್ಮಾನ್ಯ ಶಾಸಕರಾದ ಡಿಸಿ ಗೌರಿಶಂಕರ್ ರವರು, ಹೆಬ್ಬುರೂ ನಲ್ಲಿ ೩೦೦.ಕ್ಕೂ ಹೆಚ್ಚು ಜನಗಳಿಗೆ ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳ ಮಾಶಾಸನ ಪ್ರತಿ ವಿತರಿಸಿ, ಭಾರಿ ಮಳೆಯಿಂದ ಹಾನಿಯಾಗಿ ಮನೆ ಬಿದ್ದಂತಹ ಕುಟುಂಬಗಳಿಗೆ ರ‍್ಕಾರದ ವತಿಯಿಂದ ಕೊಡಲ್ಪಡುವ ೫೦. ಸಾವಿರ ರೂಗಳ ಪರಿಹಾರದ ಪ್ರತಿ ವಿತರಿಸಿ ದರು.

ದೇವರಾಜ ಅರಸು ಅಭಿವೃದ್ಧಿ ನಿಗಮ ವತಿಯಿಂದ ಬರ‍್ವೆಲ್ ಕೊರೆದಿರುವ ಫಲಾನುಭವಿಗಳಿಗೆ, ಪಂಪು, ಮೋಟಾರ್, ಹಾಗೂ ಬರ‍್ವೆಲ್ ಸಲಕರಣೆಗಳನ್ನು ಸನ್ಮಾನ್ಯ ಶಾಸಕರಾದ ಡಿಸಿ ಗೌರಿಶಂಕರ್ ರವರು ಹಾಗೂ ಅಧಿಕಾರಿಗಳ ಸಮೂಹ ದೊಂದಿಗೆ ಫಲಾನುಭವಿಗೆ ಇಂದು ವಿತರಿಸಿದರು.

ಇದೇ ಸಂರ‍್ಭದಲ್ಲಿ-ಬಡ ಕುಟುಂಬದವರನ್ನು ಗುರುತಿಸಿ ಬರ‍್ವೆಲ್ ಕೊರೆಸಿ, ಮೋಟರ್ ಪಂಪ್ ವಿತರಿಸಿದ್ದು, ಫಲಾನುಭವಿಗಳು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಶಾಸಕರಾದ ಡಿಸಿ ಗೌರಿಶಂಕರ್ ರವರಿಗೆ ಹೂ ಮಾಲೆ ಹಾಕುವ ಮೂಲಕ ಹರುಷ ವ್ಯಕ್ತಪಡಿಸಿ, ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ಇದೇ ಸಂರ‍್ಭದಲ್ಲಿ ಮುಖಂಡರುಗಳಾದ: ಹೆಬ್ಬೂರು ಜಿಲ್ಲಾ ಪಂಚಾಯ್ತಿ ಜೆಡಿಎಸ್ ಉಸ್ತುವಾರಿಗಳಾದ ಸಿರಾಕ್ ರವೀಶ್, ಶಾಂತ ಪುರ ಗೌಡಪ್ಪ, ಕೆ ಬಿ ರಾಜಣ್ಣ, ಬಾಬು ಶಾಂತಪುರ, ಕೊಡಿಮುದ್ದನಹಳ್ಳಿ ಪ್ರಕಾಶ್, ಸೋಮಣ್ಣ ಹೆಬ್ಬುರ್, ಲಾಟರಿ ನಾರಾಯ ಣಪ್ಪ, ಡೈರಿ ವೆಂಕಟೇಶ್, ರಾಜೇಶ್ ದೊಡ್ಡ ಗೊಳ್ಳಹಳ್ಳಿ, ಚಿಕ್ಕಣ್ಣ ಸಂಗಳಪೂರ, ನಾಸೀರ್, ಇನ್ನು ಹಲವು ಮುಖಂಡರು ಹಾಗೂ ಕರ‍್ಯರ‍್ತರು ಉಪಸ್ಥಿತರಿದ್ದರು.