Monday, 12th May 2025

ಮೇಘಸ್ಫೋಟ: ಒಂದೇ ಕುಟುಂಬದ ನಾಲ್ವರ ಸಾವು

ಶ್ರೀನಗರ: ಬಾರಾಮುಲ್ಲಾ ಜಿಲ್ಲೆಯ ಹುಲ್ಲುಗಾವಲಿನಲ್ಲಿ ಭಾನುವಾರ ಭಾರಿ ಪ್ರಮಾಣದಲ್ಲಿ ಮೇಘಸ್ಫೋಟದ ಪರಿಣಾಮ ‘ಬಕರ್ವಾಲ್’  ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಜಿಲ್ಲೆಯ ರಫಿಯಾಬಾದ್ ಪ್ರದೇಶದ ಕಫರ್ನಾರ್ ಹುಲ್ಲುಗಾವಲಿನಲ್ಲಿ ಬಕರ್ವಾಲ್ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದ ಆರು ಸದಸ್ಯರಲ್ಲಿ ನಾಲ್ವರು ಮೃತಪಟ್ಟಿದ್ದು, ಒಬ್ಬರು ಜೀವಂತವಾಗಿ ಪತ್ತೆಯಾಗಿದ್ದು, ಇನ್ನೊಬ್ಬರು ಕಾಣೆಯಾಗಿದ್ದಾರೆ.

ಕುಟುಂಬವು ರಜೌರಿ ಜಿಲ್ಲೆಯ ಹಾಜಿ ಬಷೀರ್ ಅಹ್ಮದ್ ಖಾರಿಗೆ ಸೇರಿತ್ತು. ಮೇಘಸ್ಫೋಟದಿಂದ ಕುಟುಂಬವೇ ನಾಶವಾಗಿ ಹೋಗಿದೆ.

Leave a Reply

Your email address will not be published. Required fields are marked *