Monday, 12th May 2025

’ಯಾಸ್’ ದುರ್ಬಲ : 15 ಲಕ್ಷ ಜನರ ಸ್ಥಳಾಂತರ, ಲಕ್ಷಕ್ಕೂ ಹೆಚ್ಚು ಮನೆ ಹಾನಿ

ನವದೆಹಲಿ: ಯಾಸ್ ಚಂಡಮಾರುತವು ಗಂಟೆಗೆ 130-140 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯೊಂದಿಗೆ ಬಾಲಸೋರ್‌ನಿಂದ ದಕ್ಷಿಣಕ್ಕೆ 20 ಕಿ.ಮೀ ದೂರದಲ್ಲಿರುವ ಉತ್ತರ ಒಡಿಶಾ ಕರಾವಳಿಯನ್ನು ದಾಟಿದೆ. ಮಧ್ಯಾಹ್ನ ಬಾಲಸೋರ್‌ನಿಂದ ನೈಋತ್ಯಕ್ಕೆ 15 ಕಿ.ಮೀ ದೂರದಲ್ಲಿರುವ ಉತ್ತರ ಕರಾವಳಿ ಒಡಿಶಾಕ್ಕೆ ತಲುಪಿತು.

ಗಂಟೆಗೆ 100-110 ಕಿ.ಮೀ ಗಾಳಿ ಯೊಂದಿಗೆ ಯಾಸ್ ಚಂಡಮಾರುತವು ದುರ್ಬಲ ಗೊಂಡಿದೆ. ಮಧ್ಯಾಹ್ನ 1.30 ಕ್ಕೆ ಇದು ಬಾಲ ಸೋರ್‌ನಿಂದ 15 ಕಿ.ಮೀ ದೂರದಲ್ಲಿತ್ತು ಹಾಗೂ ಉತ್ತರ ಕರಾವಳಿ ಒಡಿಶಾದ ಮೇಲೆ ಕೇಂದ್ರೀಕೃತವಾಗಿತ್ತು.

ಒಡಿಶಾದಲ್ಲಿ ಚಂಡಮಾರುತದಿಂದ ತೀವ್ರ ಪೀಡಿತವಾದ ಜಿಲ್ಲೆಗಳಾದ ಬಾಲಸೋರ್, ಭದ್ರಕ್, ಜಗತ್ ಸಿಂಗ್‌ಪುರ ಮತ್ತು ಕೇಂದ್ರ ಪಾರಾ. ಬಂಗಾಳದಲ್ಲಿ ದಕ್ಷಿಣ ಹಾಗೂ ಉತ್ತರ 24 ಪರಗಣಗಳು, ದಿಘಾ, ಪೂರ್ವ ಮೇದಿನಿಪುರ ಹಾಗೂ ನಂದಿಗ್ರಾಮ್ ಹೆಚ್ಚು ಹಾನಿಗೊಳಗಾದವು. ಕೋಲ್ಕತ್ತಾದ ಹದಿಮೂರು ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದವು.

15 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, ಮೂರು ಲಕ್ಷ ಮನೆಗಳಿಗೆ ಹಾನಿಯಾಗಿದೆ. 134 ಕಿರು ಅಣೆಕಟ್ಟುಗಳು ನಾಶವಾಗಿವೆ. ಅಂದಾಜು ಒಂದು ಕೋಟಿ ಜನರ ಮೇಲ ಪರಿಣಾಮ ಬೀರಿದೆ. ರಾಜ್ಯಕ್ಕೆ ರೂ. 10 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ನೀಡಲಾಗಿದೆ.

ಸುಮಾರು 20,000 ಮಣ್ಣಿನ ಮನೆಗಳು ಹಾಗೂ ತಾತ್ಕಾಲಿಕ ಆಶ್ರಯಮನೆಗಳು ನಾಶವಾಗಿವೆ ಅಥವಾ ಹಾನಿಗೊಳಗಾದವು ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *