Tuesday, 13th May 2025

ಭಾರತದ ಮಿಷನ್ ನ ಉಪ ಮುಖ್ಯಸ್ಥ ಫರ್ಡಿ ಪಿಯಾಯ್ ಕೋವಿಡ್‌ಗೆ ಬಲಿ

ನವದೆಹಲಿ : ಇಂಡೋನೇಷ್ಯಾದ ಭಾರತದ ಮಿಷನ್ ನ ಉಪ ಮುಖ್ಯಸ್ಥ ಫರ್ಡಿ ಪಿಯಾಯ್ ಅವರು ಜಕಾರ್ತಾದ ಆಸ್ಪತ್ರೆಯಲ್ಲಿ ಕೋವಿಡ್-19 ರಿಂದ ನಿಧನರಾದರು.

ಇಂಡೋನೇಷ್ಯಾದ ಭಾರತದ ಮಿಷನ್ ನ ಉಪ ಮುಖ್ಯಸ್ಥ ಫರ್ಡಿ ಪಿಯಾಯ್ ಅವರು ದೆಹಲಿಯಲ್ಲಿದ್ದಾಗ ಕರೋನಾ ವೈರಸ್ ಗೆ ಒಳಗಾಗಿದ್ದರು. ಏಪ್ರಿಲ್ 27 ರಂದು, ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಜಕಾರ್ತಾದ ಆಸ್ಪತ್ರೆಗೆ ವರ್ಗಾಯಿಸ ಲಾಯಿತು.

ಡಿಸೆಂಬರ್ ೨೦೨೦ ರಲ್ಲಿ ಹೈದರಾಬಾದ್ ನ ಬಯೋಟೆಕ್ ಕಂಪನಿಗಳಾದ ಭಾರತ್ ಬಯೋಟೆಕ್ ಮತ್ತು ಬಯೋಲಾಜಿಕಲ್ ಇ ಗೆ ಭೇಟಿ ನೀಡಿದ ೬೪ ವಿದೇಶಿ ರಾಯಭಾರಿಗಳ ನಿಯೋಗದ ಸದಸ್ಯರಲ್ಲಿ ಒಬ್ಬರಾಗಿದ್ದರು. ತನ್ನ ಭೇಟಿಯಲ್ಲಿ, ಸಾಂಕ್ರಾಮಿಕ ರೋಗ ನಿಯಂತ್ರಿಸಲು ಲಸಿಕೆಗಳು ಸಮಯಕ್ಕೆ ಸರಿಯಾಗಿ ಸಿದ್ಧವಾಗಿರುತ್ತವೆ ಎಂದು ಆಶಿಸುತ್ತೇನೆ ಎಂದು ಪಿಯಾಯ್ ಹೇಳಿದ್ದರು.

ಭಾರತಕ್ಕೆ ಇಂಡೋನೇಷ್ಯಾದ ಮಾಜಿ ರಾಯಭಾರಿ ಸಿದ್ಧಾರ್ಥ್ಹೋ ಸುರೋಡಿಪುರೊ ಅವರು ತಮ್ಮ ಸಹೋದ್ಯೋಗಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಏಪ್ರಿಲ್ ನಲ್ಲಿ, ತಾಂಜೇನಿಯಾದ ಅಧಿಕಾರಿಯೊಬ್ಬರು ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟ ಮೊದಲ ವಿದೇಶಿ ರಾಜತಾಂತ್ರಿಕರಾಗಿದ್ದಾರೆ. ತಾಂಜೇನಿಯಾದ ರಕ್ಷಣಾ ಸಲಹೆಗಾರ ಕರ್ನಲ್ ಡಾ. ಮೋಸೆಸ್ ಬೀಟಸ್ ಮ್ಲುಲಾ ಅವರು ಏಪ್ರಿಲ್ ೨೮ ರಂದು ದೆಹಲಿ ಕಂಟೋನ್ಮೆಂಟ್ ನ ಬೇಸ್ ಆಸ್ಪತ್ರೆಯಲ್ಲಿ ನಿಧನರಾದರು.

Leave a Reply

Your email address will not be published. Required fields are marked *