Thursday, 15th May 2025

ಮನೋಬಲ ಹೆಚ್ಚಿಸಿದ ಮೃತ್ಯುಂಜಯ

ಮೃತ್ಯುವನ್ನು ಜಯಸುವವನಿಗೆ ಮೃತ್ಯುಂಜಯ ಎಂದು ಕರೆಯುತ್ತಾರೆ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ನಟ ಯಶಸ್‌ಸೂರ್ಯ ಚಿತ್ರದ ಟೀಸರನ್ನು ರಿಲೀಸ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಸ್ಚಚ್ಚ ಭಾರತ ಕಿರುಚಿತ್ರಕ್ಕೆ ಪ್ರಶಸ್ತಿ ಪಡೆದು, ಮಂತ್ರಂ ಚಿತ್ರವನ್ನು ನಿರ್ದೇಶನ ಮಾಡಿರುವ ಸಂಗಮೇಶ್.ಎಸ್.ಸಜ್ಜನ್, ಎರಡನೇ ಪ್ರಯತ್ನ ಎನ್ನುವಂತೆ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶೈಲಜಾ ಪ್ರಕಾಶ್ ಬಂಡವಾಳ ಹೂಡಿದ್ದು ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ. ಸಾಮಾಜಿಕ ವಿಷಯಗಳನ್ನು ಸೆಸ್ಪೆನ್ಸ್‌, ಥ್ರಿಲ್ಲರ್ ಅಂಶಗಳ ಮೂಲಕ ಹೇಳುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ. ಆತ್ಮಹತ್ಯೆ ವಿರುದ್ದ ಹೋರಾಟಕ್ಕೆ ಮುನ್ನುಡಿ ಇರಲಿದೆ.

ಇದರ ಹಿಂದೆ ಹೋಗುವ ಯುವ ಮನಸುಗಳನ್ನು ಪರಿವರ್ತನೆ ಮಾಡಿ ಅವರುಗಳನ್ನು ಸರಿದಾರಿಗೆ ತರುವುದು. ಆತ್ಮಹತ್ಯೆ ದೊಡ್ಡತಪ್ಪು. ನಾವು ಬದುಕನ್ನು ಹೇಗೆ ನಡೆಸಬೇಕೆಂದು ಸಂದೇಶವನ್ನು ಸನ್ನಿವೇಶಗಳ ಮುಖಾಂತರ ತೋರಿಸಲಾಗಿದೆ. ನಾಯಕನಾಗಿ ಹಿತೇಶ್, ನಾಯಕಿಯಾಗಿ ಕರಾವಳಿ ಬೆಡಗಿ ಶ್ರೀಯಾಶೆಟ್ಟಿ ನಟಿಸಿದ್ದಾರೆ.

ಇಬ್ಬರಿಗೂ ಇದು ಹೊಸ ಅವಕಾಶವಾಗಿದೆ. ಮತ್ತೊಂದು ಮುಖ್ಯ ಪಾತ್ರದಲ್ಲಿ ಮನೋವೈದ್ಯರಾಗಿ ಸುಮನ್‌ನಗರ್ಕರ್ ಕಾಣಿಸಿ ಕೊಂಡಿದ್ದಾರೆ. ಇವರೊಂದಿಗೆ ಆಟೋರಾಜ, ದುರ್ಗಾಪ್ರಸಾದ್, ಚೇತನ್‌ದುರ್ಗಾ, ಶಿವು ಮಜಾಭಾರತ, ರಂಗಭೂಮಿ ಕಲಾವಿದೆ ಪವಿತ್ರಾ, ಚೈತ್ರಾ, ಬಾಬಣ್ಣ ಮುಂತಾದವರು ನಟಿಸಿದ್ದಾರೆ.

ಬೆಂಗಳೂರು ಹಾಗೂ ಡಾಬಸಪೇಟೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ಆನಂದ್‌ರಾಜ್ ವಿಕ್ರಂ, ಛಾಯಾಗ್ರಹಣ ವಡ್ಡೆ ದೇವೇಂದ್ರರೆಡ್ಡಿ, ಸಂಕಲನ ಸಾಯಿಸಂದೇಶ್ ಅವರದಾಗಿದೆ. ಕರೋನ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ 198 ಗಂಟೆಗಳ ಕಾಲ ಸತತವಾಗಿ ಶೂಟ್ ಮಾಡಿ ರುವುದು. ಹಾಗೆಯೇ 800 ಜನರೊಂದಿಗೆ ಕ್ಲೈಮ್ಯಾಕ್ಸ್‌ ದೃಶ್ಯಗಳನ್ನು
ಸರೆಹಿಡಿದಿರುವುದು ವಿಶೇಷ. ಯು/ಎ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆ ಇದೆ.

Leave a Reply

Your email address will not be published. Required fields are marked *