Tuesday, 13th May 2025

ಮುಂಬೈಗೆ ಬಂದಿಳಿದ ರಸೆಲ್, ಸುನೀಲ್‌ ನಾರಾಯಣ್‌

ಮುಂಬೈ: ಕೋಲ್ಕತಾ ನೈಟ್‌ರೈಡರ್ ತಂಡದ ಆಟಗಾರರಾದ ವಿಂಡೀಸಿನ ಆಂಡ್ರೆ ರಸೆಲ್‌ ಮತ್ತು ಸುನೀಲ್‌ ನಾರಾಯಣ್‌ 14ನೇ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಬಂದಿಳಿದರು.

ಪಂದ್ಯಾವಳಿ ಭಾರತದಲ್ಲೇ ನಡೆಯುತ್ತಿರುವುದಕ್ಕೆ ಬಹಳ ಸಂತಸ ಆಗುತ್ತಿದೆ. ಮತ್ತೂಮ್ಮೆ ಗೋಲ್ಡ್‌-ಪರ್ಪಲ್‌ನಲ್ಲಿ ಮಿಂಚಲು ಕಾತರಗೊಂಡಿದ್ದೇವೆ’ ಎಂಬುದಾಗಿ ಸುನೀಲ್‌ ನಾರಾಯಣ್‌ ಹೇಳಿದರು.

ನಾವು ಯಾವುದೇ ಸ್ಥಿತಿಯಲ್ಲಿದ್ದರೂ ನಿಮ್ಮ ಬೆಂಬಲ ನಮಗಿರಲಿ’ ಎಂದು ಅವರು ಕೆಕೆಆರ್‌ ಅಭಿಮಾನಿಗಳಲ್ಲಿ ವಿನಂತಿಸಿದರು.

ಕೆಕೆಆರ್‌ ಆಟಗಾರರೆಲ್ಲ ಶನಿವಾರ ಮುಂಬಯಿಯಲ್ಲಿ ಒಟ್ಟುಗೂಡಿ ಕ್ವಾರಂಟೈನ್‌ ಪ್ರಕ್ರಿಯೆ ಆರಂಭಿಸಲಿದ್ದಾರೆ. ಈಗಾಗಲೇ ಜೈವಿಕ ಸುರಕ್ಷಾ ವಲಯದಲ್ಲಿರುವ ಇಯಾನ್‌ ಮಾರ್ಗನ್‌, ಶುಭಮನ್‌ ಗಿಲ್‌, ಕುಲದೀಪ್‌ ಯಾದವ್‌, ಪ್ರಸಿದ್ಧ್ ಕೃಷ್ಣ ಅವರಿಗೆಲ್ಲ ಕ್ವಾರಂಟೈನ್‌ ಅನ್ವಯಿಸುವುದಿಲ್ಲ.

Leave a Reply

Your email address will not be published. Required fields are marked *