Thursday, 15th May 2025

ರಾಷ್ಟ್ರ ಪ್ರಶಸ್ತಿ ಗೆದ್ದ ಅವನೇ ಶ್ರೀಮನ್ನಾರಾಯಣ ಚಿತ್ರ

ಬೆಂಗಳೂರು : ಕನ್ನಡದ ರಕ್ಷಿತ್​ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಹಾಗೂ ತುಳು ಭಾಷೆಯ ಪಿಂಗಾರಾ ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟಗೊಂಡಿದೆ.

ಬ್ಲಾಕ್ ಬಸ್ಟರ್ ಚಿತ್ರಗಳ ಸಾಲಿಗೆ ಸೇರಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ ಒದಗಿದೆ. ಈ ಚಿತ್ರಕ್ಕೆ ವಿಕ್ರಮಂ ಮೋರ್​ ಅವರು ಸಾಹಸ ನಿರ್ದೇಶನ ಮಾಡಿದ್ದರು.

ಬೆಸ್ಟ್​ ಬುಕ್​ ಆನ್​ ಸಿನಿಮಾ ವಿಭಾಗದಲ್ಲಿ ಎರಡನೇ ವಿಜೇತರಾಗಿ ಪಿ.ಆರ್ ರಾಮದಾಸ ನಾಯ್ಡು ಆಯ್ಕೆ ಆಗಿದ್ದಾರೆ. ಅವರು ‘ಜಾಗತಿಕ ಸಿನಿಮಾ’ ಹೆಸರಿನ ಪುಸ್ತಕ ಬರೆದಿದ್ದರು. ಕನ್ನಡದ ‘ಅಕ್ಷಿ’ ಚಿತ್ರ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯ ಹಿಂದಿಯ ಚಿಚೋರ್ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿವೆ.

ಕೋವಿಡ್ ಪಿಡುಗು ಹಿನ್ನೆಲೆಯಲ್ಲಿ 2019ರಲ್ಲಿ ಪ್ರಶಸ್ತಿ ಘೋಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಈಗ ಘೋಷಣೆಯನ್ನು ಮಾಡಲಾಗಿದೆ.

Leave a Reply

Your email address will not be published. Required fields are marked *