Monday, 12th May 2025

ದೀಪ್ ಸಿಧು ಬಂಧನ ಅವಧಿ ವಿಸ್ತರಣೆ

ನವದೆಹಲಿ: ನವದೆಹಲಿಯ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳ ಗಾದ ಪಂಜಾಬಿ ನಟ ದೀಪ್ ಸಿಧು ಬಂಧನ ಅವಧಿ ಏಳು ದಿನಗಳವರೆಗೆ ವಿಸ್ತರಣೆಯಾಗಿದೆ.

ನಟ ದೀಪ್ ಸಿಧು ಹರಿಯಾಣದ ಕರ್ನಾಲ್‌ನಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದು ಆತನ ಪತ್ತೆಗೆ ಪೋಲೀಸರು ವ್ಯಾಪಕ ಶೋಧ ನಡೆಸಿದ್ದಲ್ಲದೆ ಅವನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದ್ದರು. ಜನವರಿ 26 ರ ಹಿಂಸಾಚಾರದ ತನಿಖೆಯನ್ನು ಸ್ಥಳೀಯ ಪೋಲೀಸರು, ವಿಶೇಷ ಕೋಶ ಮತ್ತು ಅಪರಾಧ ಶಾಖೆಗಳು ಮೂರು ಹಂತಗಳಲ್ಲಿ ಕೈಗೊಂಡಿದೆ.

ಜ.26 ರಂದು, ಗಾಝಿಪುರರ ಗಡಿಯಿಂದ ಐಟಿಒ ತಲುಪಿದ ಹತ್ತಾರು ಪ್ರತಿಭಟನಾಕಾರ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ವ್ಯಾಪಕವಾಗಿ ಖಂಡಿಸಲ್ಪಟ್ಟ ಹಿಂಸಾಚಾರದಲ್ಲಿ ಪೊಲೀಸರೊಂದಿಗೆ ಘರ್ಷಣೆ ಜತೆಗೇ ಆಕ್ರೋಶಗೊಂಡ ರೈತರು ಪಾರಂಪರಿಕ ಕೆಂಪು ಕೋಟೆಗೆ ನುಗ್ಗಿ ಹತ್ತಿ ಝಳಪಿಸಿ ಸಿಖ್ಖ್ ಧ್ವಜವನ್ನು ಹಾರಿಸಿದ್ದರು.

Leave a Reply

Your email address will not be published. Required fields are marked *